অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಜೈವಿಕ ಇಂಧನ

ಜೈವಿಕ ಇಂಧನವು ಜೈವಿಕ ಮೂಲಗಳಿಂದ ಅಂದರೆ ಸಸ್ಯಜನ್ಯ ಅಥವಾ ಪ್ರಾಣಿಜನ್ಯ ಮೂಲಗಳಿಂದ ಉತ್ಪಾದನೆಯಾಗುವ ಇಂಧನ. ವಿವಿಧ ಎಣ್ಣೆ ಬೀಜಗಳು, ಪ್ರಾಣಿ ಜನ್ಯ ಕೊಬ್ಬು, ಕಬ್ಬು, ಸಿಹಿಜೋಳ, ಗೋವಿನಜೋಳ ಮುಂತಾದ ಸಕ್ಕರೆ ಅಂಶವುಳ್ಳ ಉತ್ಪನ್ನಗಳಿಂದ ಹಾಗೂ ಭವಿಷ್ಯದಲ್ಲಿ ಸಮುದ್ರದ ಹಿನ್ನೀರಿನಲ್ಲಿ, ಅನುಪಯುಕ್ತ ಹಾಗೂ ಮಲೀನ ನೀರಿನ ಮೇಲೆ ಸುಲಭವಾಗಿ ಬೆಳೆಯಬಲ್ಲ, ಆಲ್ಗಿ ಬೆಳೆಗಳಿಂದ ಜೈವಿಕ ಇಂಧನವನ್ನು ತಯಾರಿಸಿ, ವಾಹನ ಹಾಗೂ ಇತರೆಡೆ ಬಳಸಬಹುದಾಗಿದೆ.ಕಚ್ಚಾ ತೈಲಕ್ಕೆ ಪರ್ಯಾಯವಾಗಿ ಜೈವಿಕ ಇಂಧನ ರಾಷ್ಟ್ರದ ಇಂಧನ ಸಮಸ್ಯೆ ಬಗೆಹರಿಸಬಲ್ಲ ಏಕೈಕ ಆಶಾಕಿರಣವಾಗಿದೆ.

ಜೈವಿಕ ಇಂಧನವು ಜೈವಿಕ ಮೂಲಗಳಿಂದ ಅಂದರೆ ಸಸ್ಯಜನ್ಯ ಅಥವಾ ಪ್ರಾಣಿಜನ್ಯ ಮೂಲಗಳಿಂದ ಉತ್ಪಾದನೆಯಾಗುವ ಇಂಧನ. ವಿವಿಧ ಎಣ್ಣೆ ಬೀಜಗಳು, ಪ್ರಾಣಿ ಜನ್ಯ ಕೊಬ್ಬು, ಕಬ್ಬು, ಸಿಹಿಜೋಳ, ಗೋವಿನಜೋಳ ಮುಂತಾದ ಸಕ್ಕರೆ ಅಂಶವುಳ್ಳ ಉತ್ಪನ್ನಗಳಿಂದ ಹಾಗೂ ಭವಿಷ್ಯದಲ್ಲಿ ಸಮುದ್ರದ ಹಿನ್ನೀರಿನಲ್ಲಿ, ಅನುಪಯುಕ್ತ ಹಾಗೂ ಮಲೀನ ನೀರಿನ ಮೇಲೆ ಸುಲಭವಾಗಿ ಬೆಳೆಯಬಲ್ಲ, ಆಲ್ಗಿ ಬೆಳೆಗಳಿಂದ ಜೈವಿಕ ಇಂಧನವನ್ನು ತಯಾರಿಸಿ, ವಾಹನ ಹಾಗೂ ಇತರೆಡೆ ಬಳಸಬಹುದಾಗಿದೆ.

 

ಜೈವಿಕ ಡೀಸೆಲ್ ಅನ್ನು ಸಸ್ಯಜನ್ಯ ಎಣ್ಣೆ ಅಥವಾ ಪ್ರಾಣಿಜನ್ಯ ಕೊಬ್ಬಿನಿಂದ ಉತ್ಪಾದಿಸಲಾಗುತ್ತದೆ. ಜೈವಿಕ ಡೀಸೆಲ್ ದೀರ್ಘ ಸರಪಳಿ ಕೊಬ್ಬಿನ ಆಮ್ಲದಿಂದ (Long Chain fatty acid) ಉತ್ಪತ್ತಿಯಾದ ಮೋನೊ ಅಲ್ಕೈಲ್ ಎಸ್ಟರ್ (Mono Alkyl Ester).  ಎಣ್ಣೆ ಅಥವಾ ಕೊಬ್ಬನ್ನು ಮೆಥನಾಲ್ ಅಥವಾ ಎಥನಾಲ್ ಜೊತೆ ಸೇರಿಸಿ NaOH/KOHಎಂಬ ಪ್ರತ್ಯಾಮ್ಲ ಪ್ರಚೋದಕದೊಂದಿಗೆ ಟ್ರಾನ್ಸ್‌ಎಸ್ಟರಿಫಿಕೇಷನ್ ಎಂಬ ರಾಸಾಯನಿಕ ಕ್ರಿಯೆಯ ಮೂಲಕ ಜೈವಿಕ ಡೀಸಲ್ ತಯಾರಿಸಲಾಗುತ್ತದೆ.

ಇದನ್ನು ನೇರವಾಗಿ ಅಥವಾ ಡೀಸೆಲ್ ಜೊತೆ ವಿವಿಧ ಪ್ರಮಾಣದಲ್ಲಿ ಮಿಶ್ರಣಮಾಡಿ ಉಪಯೋಗಿಸಬಹುದು. ಉದಾ: B5 ಅಂದರೆ ಶೇ.5 ರಷ್ಟು ಬಯೋ ಡೀಸೆಲ್‌ನ್ನು ಶೇ.95 ರಷ್ಟು ಪೆಟ್ರೋ-ಡೀಸೆಲ್‌ನೊಂದಿಗೆ ಮಿಶ್ರಣ, B10 ಅಂದರೆ ಶೇ.10 ರಷ್ಟು ಬಯೋ ಡೀಸೆಲ್‌ನ್ನು ಶೇ. 90 ರಷ್ಟು ಪೆಟ್ರೋಲ್-ಡೀಸೆಲ್ ನೊಂದಿಗೆ ಮಿಶ್ರಣ, B20 ಅಂದರೆ ಶೇ. 20ರಷ್ಟು ಬಯೋ ಡೀಸೆಲ್ ನ್ನು ಶೇ. 80 ರಷ್ಟು ಪೆಟ್ರೋಲ್-ಡೀಸೆಲ್‌ನೊಂದಿಗೆ ಮಿಶ್ರಣ B100 ಅಂದರೆ ಶೇ.100 ರಷ್ಟು ಬಯೋ-ಡೀಸೆಲ್‌ನ ಉಪಯೋಗ.

ಜೈವಿಕ ಎಥೆನಾಲನ್ನು ಕಬ್ಬು, ಸಿಹಿಜೋಳ, ಗೋವಿನಜೋಳ ಮುಂತಾದ ಶರ್ಕಾರಾಂಶಗಳಿಂದ ಉತ್ಪಾದಿಸಲಾಗುತ್ತದೆ. ಕೃಷಿ ತ್ಯಾಜ್ಯಗಳಾದ ಕಬ್ಬಿನ ಸಿಪ್ಪೆ, ಹುಲ್ಲು ಮೊದಲಾದವುಗಳಲ್ಲಿರುವ ಸೆಲ್ಯುಲೋಸ್ ಎಂಬ ಸಂಯುಕ್ತ ಶರ್ಕರಾಂಶದಿಂದಲೂ ಎಥೆನಾಲ್ ಅನ್ನು ಉತ್ಪಾದಿಸಬಹುದಾಗಿದೆ. ಜೊತೆಗೆ, ಅನುಪಯುಕ್ತ ಹಣ್ಣುಗಳನ್ನು ಕೂಡ ಉಪಯೋಗಿಸಿ ಎಥೆನಾಲ್ ತಯಾರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದೆ. ಮೊದಲಿಗೆ ಸಂಯುಕ್ತಗಳನ್ನು ಸರಳ ಸಕ್ಕರೆಯನ್ನಾಗಿ ಪರಿವರ್ತಿಸಲಾಗುತ್ತದೆ. ನಂತರ ಇದನ್ನು ಸೂಕ್ಷ್ಮಜೀವಿಗಳನ್ನು ಬಳಸಿ ಹುದುಗಿಸಲಾಗುತ್ತದೆ. ಹೀಗೆ ಬರುವ ಎಥನಾಲ್ ಅನ್ನು ಭಟ್ಟಿಇಳಿಸುವಿಕೆಯ ಮುಖಾಂತರ ಜೈವಿಕ ಎಥೆನಾಲ್ ಅನ್ನು ಪಡೆಯಬಹುದು.  ಜೈವಿಕ ಎಥೆನಾಲನ್ನು ಸಾಮಾನ್ಯವಾಗಿ ಇ 100 ಅಂದರೆ ಶೇ.100 ರಷ್ಟು ಎಥೆನಾಲ್, ಇ 85 ಅಂದರೆ ಶೇ.85 ರಷ್ಟು ಎಥೆನಾಲನ್ನು ಶೇ.15 ರ ಗ್ಯಾಸೋಲಿನ್ ಮಿಶ್ರಣದೊಂದಿಗೆ ಉಪಯೋಗಿಸುವುದು.  ಶೇ.10 ರಷ್ಟು ಎಥೆನಾಲನ್ನು ಶೇ.90 ರಷ್ಟು ಗ್ಯಾಸೋಲಿನ್ ಮಿಶ್ರಣದೊಂದಿಗೆ ಗ್ಯಾಸೋಹಾಲ್ ಎಂಬ ಹೆಸರಿನಿಂದ ವಿವಿಧೆಡೆ ಉಪಯೋಗದಲ್ಲಿದೆ.

 

ಜೈವಿಕ ಇಂಧನ ಸಸ್ಯಗಳು ಹಾಗೂ ಅವುಗಳ ಬೆಳೆಸುವಿಕೆ

ಗ್ರಾಮೀಣ ಜನತೆ ಹಲವಾರು ವರ್ಷಗಳಿಂದ ಬೆಳೆಸಿಕೊಂಡು ಬರುತ್ತಿರುವ ಅನೇಕ ಸಸ್ಯಗಳು ಜೈವಿಕ ಇಂಧನಕ್ಕೆ ಮೂಲವಾಗಿವೆ. ಎಣ್ಣೆ ಅಂಶವುಳ್ಳ ಅನೇಕ ಬೀಜಗಳಿಂದ ಎಣ್ಣೆ ತೆಗೆದು ಜೈವಿಕ ಡೀಸಲ್ ಅನ್ನು ಉತ್ಪಾದಿಸಬಹುದಾಗಿದೆ. ಸೂರ್ಯಕಾಂತಿ, ಕಡ್ಲೆಕಾಯಿ ಮುಂತಾದ ಖಾದ್ಯ ತೈಲಗಳಿಂದಲೂ ಜೈವಿಕ ಇಂಧನವನ್ನು ತಯಾರಿಸಬಹುದಾಗಿದೆ. ಆದರೆ ಇವುಗಳನ್ನು ಆಹಾರವಾಗಿ ಬಳಸುವುದರಿಂದ ಆಹಾರ ಭದ್ರತೆಗೆ ಧಕ್ಕೆ ಉಂಟಾಗುತ್ತದೆ. ಆದ್ದರಿಂದ ಅಖಾದ್ಯ ತೈಲಗಳಾದ ಹೊಂಗೆ, ಬೇವು, ಸಿಮರೂಬ, ಹಿಪ್ಪೆ, ಜಟ್ರೋಪ, ಸುರಹೊನ್ನೆ ಮೊದಲಾದ ಸಸ್ಯಗಳನ್ನು ಕೃಷಿ ಯೋಗ್ಯವಲ್ಲದ ಭೂಮಿಯಲ್ಲಿ, ಬದುವಿನ ಮೇಲೆ, ಆಹಾರಧಾನ್ಯ ಬೆಳೆಗಳಿಗೆ ಪೈಪೋಟಿ ಇಲ್ಲದ ರೀತಿ ಮತ್ತು ಅತೀ ಕಡಿಮೆ ಖರ್ಚಿನಲ್ಲಿ ಮಿಶ್ರ ಬೆಳೆಯನ್ನಾಗಿ ಬೆಳೆದರೆ ಪರಿಸರ ಆರೋಗ್ಯಕರವಾಗಿರುತ್ತದೆ. ಅಲ್ಲದೇ ಉತ್ತಮ ಜೈವಿಕ ಇಂಧನ ಸಂಪನ್ಮೂಲವೂ ದೊರೆತಂತಾಗುವುದು.

ಈ ಕೆಳಗೆ ನಮೂದಿಸಿದ ಮರಗಳನ್ನು ಸಾಮಾನ್ಯವಾಗಿ ಕರ್ನಾಟಕ ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಬೆಳೆಯಬಹುದಾಗಿದೆ.  ಜೊತೆಗೆ ಹೊಂಗೆ, ಬೇವು, ಹಿಪ್ಪೆ ಮರಗಳನ್ನು ನೂರಾರು ವರ್ಷಗಳಿಂದ ರೈತರು  ತಮ್ಮ ಹೊಲ ಗದ್ದೆಗಳ ಬದುಗಳಲ್ಲಿ, ಬೇಲಿಗುಂಟ ಬೆಳಸಿಕೊಂಡು ಬಂದುದರಿಂದ ಅವುಗಳ ನಿಕಟ ಪರಿಚಯ ಅವರಿಗಿದೆ.

ಜೈವಿಕ ಇಂಧನ ಸಸ್ಯಗಳ ಬೀಜಗಳಿಂದ ತೈಲ ಇಳುವರಿ

ಸಸ್ಯಗಳು ಹೊಂಗೆ ಬೇವು ಹಿಪ್ಪೆ ಸಿಮರೂಬ ಜಟ್ರೋಪ ನಾಗ ಸಂಪಿಗೆ ಸರಹೊನ್ನೆ
ಹೂ ಬಿಡುವಿಕೆ ಮಾರ್ಚ್-ಮೇ ಮಾರ್ಚ್-ಮೇ ಮಾರ್ಚ್-ಏಪ್ರಿಲ್ ಡಿಸೆಂಬರ್-ಫೆಬ್ರವರಿ ಮೇ-ಆಗಸ್ಟ್ ಜನವರಿ-ಏಪ್ರಿಲ್ ಅಕ್ಟೋಬರ್-ಏಪ್ರಿಲ್
ಕಾಯಿ ಕೊಯ್ಲು ಜನವರಿ-ಮೇ ಜೂನ್-ಆಗಸ್ಟ್ ಜೂನ್-ಆಗಸ್ಟ್ ಫೆಬ್ರವರಿ-ಏಪ್ರಿಲ್ ಆಗಸ್ಟ್-ಅಕ್ಟೋಬರ್ ಆಗಸ್ಟ್-ಅಕ್ಟೋಬರ್ ಏಪ್ರಿಲ್-ಜೂನ್
ಉಪಯೋಗ ಜೈವಿಕ ಇಂಧನ, ಸಾಬೂನು ತಯಾರಿಕೆ, ಚರ್ಮ ಹದ ಮಾಡಲು, ಹಿಂಡಿಯನ್ನು ಗೊಬ್ಬರವಾಗಿ, ಹಸಿರೆಲೆ ಗೊಬ್ಬರ ಜೈವಿಕ ಇಂಧನ, ಔಷಧ, ಕ್ರಿಮಿಕೀಟ ನಿವಾರಣೆ, ಹಿಂಡಿಯನ್ನು ಗೊಬ್ಬರವಾಗಿ ಜೈವಿಕ ಇಂಧನ, ಸಾಬೂನು ತಯಾರಿಕೆ, ಔಷಧ, ಹಿಂಡಿಯನ್ನು ಗೊಬ್ಬರವಾಗಿ, ಕೃಷಿ ಉಪಕರಣ ಜೈವಿಕ ಇಂಧನ, ಔಷಧ, ಅಡುಗೆ ಎಣ್ಣೆ, ಕ್ರಿಮಿಕೀಟ ನಿವಾರಣೆ, ಹಿಂಡಿಯನ್ನು ಗೊಬ್ಬರವಾಗಿ ಹಿಂಡಿಯನ್ನು ಗೊಬ್ಬರವಾಗಿ,ಜೈವಿಕ ಇಂಧನ, ಕ್ರಿಮಿಕೀಟ ನಿವಾರಣೆ, ಹಿಂಡಿಯನ್ನು ಗೊಬ್ಬರವಾಗಿ
ಜೈವಿಕ ಇಂಧನ, ಔಷಧ, ಹಿಂಡಿ, ವಾರ್ನಿಷ್, ಪೇಂಟ್,  ಕ್ರಿಮಿಕೀಟ ನಿವಾರಣೆ,
ಇಳುವರಿ ಪ್ರಾರಂಭ

5 ವರ್ಷ

5 ವರ್ಷ 10 ವರ್ಷ 5 –6 ವರ್ಷ 3 ವರ್ಷ
7-8 ವರ್ಷ
ಬೀಜ ಇಳುವರಿ (ಕೆಜಿ)

15-40

10-25 10-40 10-25 1-2 8-10

10

ಎಣ್ಣೆ ಅಂಶ (ಶೇಕಡ) 27-35% 28-25% 30-35% 40-50% 35-40% 60% 60%
ಬೆಲೆ (ಕೆ.ಜಿ.ಬೀಜಕ್ಕೆ) ರೂ. 10-15 3-8 6-10 8-12 3-6
8-10

ಅಂತರ್ ಬೆಳೆಯಾಗಿ ಇಂಧನ ಬೆಳೆಗಳು

ರೈತರು ತಮ್ಮ ಜಮೀನಿನಲ್ಲಿ ಕೃಷಿ ಯೋಗ್ಯವಾದ ಭೂಮಿಯಲ್ಲಿ ಒಂದು ಬೆಳೆ ಬೆಳೆದ ನಂತರ ಅಂದರೆ ಮುಂಗಾರು ಕಟಾವಿನ ನಂತರವೂ ಕೆಲವೊಂದು ಖಾದ್ಯೇತರ ಅಲ್ಪಾವಧಿ ಬೆಳೆಗಳನ್ನು ಹೆಚ್ಚುವರಿಯಾಗಿ ಬೆಳೆಯುವುದು ಸಾದ್ಯ.  ಇಂತಹ ತೈಲ ಬೆಳೆಗಳ ಪೈಕಿ ಪುಂಡಿ, ಹರಳು ಇತ್ಯಾದಿ ಬೆಳೆಗಳು ಪ್ರಮುಖವಾಗಿವೆ.   ಅಲ್ಲದೇ, ಬದುಗುಂಟ, ಬೇಲಿ ಗುಂಟ ಹೊಂಗೆಮರ ನೆಟ್ಟಾಗ ಪ್ರತಿ ಎರಡು ಗಿಡಗಳ ಮಧ್ಯೆ ಎರಡು ಅಥವಾ ಮೂರು ಹರಳು ಅಥವಾ ಪುಂಡಿ ಗಿಡಗಳನ್ನು ಬೆಳೆಯ ಬಹುದಾಗಿದೆ. ಇದರಿಂದ ಹೆಚ್ಚುವರಿ ಆದಾಯ ರೈತರು ಪಡೆಯಬಹುದು. ರಾಜ್ಯದಲ್ಲಿ ಉತ್ತರ ಕರ್ನಾಟಕದ ಕಡಿಮೆ ಮಳೆಯಾಗುವ ಮಳೆಯಾಧಾರಿತ ಜಮೀನಿನಲ್ಲಿ ಕಡಲೆಕಾಯಿ (ಶೇಂಗಾ), ಮೆಣಸಿನಕಾಯಿ ಹಾಗೂ ಹೊಗೆ ಸೊಪ್ಪಿನ ಕಟಾವಿನ ನಂತರವಾಗಲಿ ಅಥವಾ ಮಧ್ಯದ ಬೆಳೆಯಾಗಿ ಪುಂಡಿ ಮತ್ತು ಹರಳುಗಳಂತಹ ಗಿಡಗಳನ್ನು ಅಂತರ್ ಬೆಳೆಯಾಗಿ ಬೆಳೆಯಬಹುದು.

ರೈತರು ತಮ್ಮ ಜಮೀನಿನಲ್ಲಿ ಕೃಷಿ ಯೋಗ್ಯವಾದ ಭೂಮಿಯಲ್ಲಿ ಒಂದು ಬೆಳೆ ಬೆಳೆದ ನಂತರ ಅಂದರೆ ಮುಂಗಾರು ಕಟಾವಿನ ನಂತರವೂ ಕೆಲವೊಂದು ಖಾದ್ಯೇತರ ಅಲ್ಪಾವಧಿ ಬೆಳೆಗಳನ್ನು ಹೆಚ್ಚುವರಿಯಾಗಿ ಬೆಳೆಯುವುದು ಸಾದ್ಯ.  ಇಂತಹ ತೈಲ ಬೆಳೆಗಳ ಪೈಕಿ ಪುಂಡಿ, ಹರಳು ಇತ್ಯಾದಿ ಬೆಳೆಗಳು ಪ್ರಮುಖವಾಗಿವೆ.   ಅಲ್ಲದೇ, ಬದುಗುಂಟ, ಬೇಲಿ ಗುಂಟ ಹೊಂಗೆಮರ ನೆಟ್ಟಾಗ ಪ್ರತಿ ಎರಡು ಗಿಡಗಳ ಮಧ್ಯೆ ಎರಡು ಅಥವಾ ಮೂರು ಹರಳು ಅಥವಾ ಪುಂಡಿ ಗಿಡಗಳನ್ನು ಬೆಳೆಯ ಬಹುದಾಗಿದೆ. ಇದರಿಂದ ಹೆಚ್ಚುವರಿ ಆದಾಯ ರೈತರು ಪಡೆಯಬಹುದು. ರಾಜ್ಯದಲ್ಲಿ ಉತ್ತರ ಕರ್ನಾಟಕದ ಕಡಿಮೆ ಮಳೆಯಾಗುವ ಮಳೆಯಾಧಾರಿತ ಜಮೀನಿನಲ್ಲಿ ಕಡಲೆಕಾಯಿ (ಶೇಂಗಾ), ಮೆಣಸಿನಕಾಯಿ ಹಾಗೂ ಹೊಗೆ ಸೊಪ್ಪಿನ ಕಟಾವಿನ ನಂತರವಾಗಲಿ ಅಥವಾ ಮಧ್ಯದ ಬೆಳೆಯಾಗಿ ಪುಂಡಿ ಮತ್ತು ಹರಳುಗಳಂತಹ ಗಿಡಗಳನ್ನು ಅಂತರ್ ಬೆಳೆಯಾಗಿ ಬೆಳೆಯಬಹುದು.

ಹೊಂಗೆ

ಸಾಮಾನ್ಯ ಹೆಸರು         :         ಹೊಂಗೆ

ಸಸ್ಯ ಶಾಸ್ತ್ರೀಯ ಹೆಸರು  :         ಪೊಂಗಾಮಿಯ ಪಿನ್ನಾಟ

ಕುಟುಂಬ                     :         ಫ್ಯಾಬೆಸಿ

ಸ್ಥಳೀಯ ಹೆಸರುಗಳು     :         ಕನ್ನಡ-ಹೊಂಗೆ; ಅಸ್ಸಾಮಿ-ಕರಾಚಲ್; ಬೆಂಗಾಲಿ,ಹಿಂದಿ, ಗುಜರಾತಿ-ಕರಂಜ;  ತಮಿಳು – ಪೊಂಗಾಮ್; ತೆಲುಗು – ಕಾನಗ.

ಹೊಂಗೆಮರ ನಮ್ಮ ದೇಶದ ಬಹಳಷ್ಟು ಪ್ರದೇಶಗಳಲ್ಲಿ ಬೆಳೆಯುವುದು.  ಈ ಮರವನ್ನು ನದಿ ತೀರದಲ್ಲಿ, ನಾಲಾ ಪಕ್ಕದಲ್ಲಿ, ರಸ್ತೆಯ ಬದಿಯಲ್ಲೂ ಸಹ ಬೆಳೆಸಬಹುದು.  ಹೊಂಗೆ ಗಿಡಗಳನ್ನು ಬೇಲಿಯ ಅಂಚಿನಲ್ಲಿ, ಬದುಗಳ ಮೇಲೆ ಮತ್ತು ಪಾಳು ಜಮೀನು/ ಬಂಜರು ಭೂಮಿಯಲ್ಲಿ ಹಾಗೂ ಕಡಿಮೆ ಮಳೆಯಾಗುವ ಪ್ರದೇಶಗಳಲ್ಲಿಯೂ ಸಹ ಬೆಳೆಸಬಹುದು.

ಹೊಂಗೆ ಮಧ್ಯಮ ಗಾತ್ರದ ಮರ. ಈ ಮರವು ಸೂರ್ಯನ ಬೆಳಕು ಸಾಕಷ್ಟು ದೊರೆಯುವ ಸ್ಥಳದಲ್ಲಿ ಬಹಳ ಚೆನ್ನಾಗಿ ಬೆಳೆಯುತ್ತದೆ. ಇದಕ್ಕೆ ನೆರಳಿನಲ್ಲಿಯೂ ಬೆಳೆಯುವ ಸಾಮರ್ಥ್ಯವಿದೆ. ಈ ಮರವು 500-2500 ಸೆಂ.ಮಿ. ಮಳೆ ಬೀಳುವ ಪ್ರದೇಶ ಹಾಗು 10-40 ಡಿಗ್ರಿ ಸೆಲ್ಷಿಯಸ್ ತಾಪಮಾನದಲ್ಲಿ ಬೆಳೆಯುತ್ತದೆ. ಇದನ್ನು ಕಡಿದರೆ ಪುನಃ ಚಿಗುರುವ ಗುಣವನ್ನು ಹೊಂದಿದೆ. ಸಾಮಾನ್ಯವಾಗಿ ಹೊಂಗೆಯ ಮರವು ಎಲ್ಲಾ ರೀತಿಯ ವಾತಾವರಣ ಹಾಗೂ ಎಲ್ಲಾ ಬಗೆಯ ಮಣ್ಣಿನಲ್ಲಿ ಬೆಳೆಯುತ್ತದೆ. ಆದರೆ, ಫಲವತ್ತಾದ ಮಣ್ಣು ಮತ್ತು ತೇವಾಂಶ ಹೆಚ್ಚಿರುವ ಕಡೆ ಹೊಂಗೆ ಮರವು ಚೆನ್ನಾಗಿ ಬೆಳೆಯುತ್ತದೆ.

ಹೊಂಗೆ ಬಹು ಉಪಯೋಗಿ ಮರ. ಹಿಂದಿನಿಂದಲೂ ಈ ಮರದ ಬೀಜಕ್ಕೆ ಬಹಳ ಪ್ರಾಮುಖ್ಯತೆ ಇದೆ. ಮನೆಗಳಲ್ಲಿ ದೀಪ ಉರಿಸಲು ಬೀಜದಿಂದ ತೆಗೆದ ಎಣ್ಣೆಯನ್ನು ಉಪಯೋಗಿಸುತ್ತಿದ್ದರು. ಈಗ ಹೊಂಗೆ ಎಣ್ಣೆಯಿಂದ ಪಂಪ್‌ಸೆಟ್, ಜನರೇಟರ್, ಟ್ರಾಕ್ಟರ್, ಪವರ್ ಟಿಲ್ಲರ್, ಬಸ್ಸು, ರೈಲು ಇಂಜಿನ್ ಓಡಿಸಬಹುದೆಂದು ಸಂಶೋಧನೆಯಿಂದ ತಿಳಿದುಬಂದಿದೆ. ಹೊಂಗೆ ಎಣ್ಣೆಯನ್ನು ಚರ್ಮ ಹದ ಮಾಡಲು, ಸಾಬೂನು ತಯಾರಿಕೆಯಲ್ಲಿ ಹಾಗೂ ಹಿಂಡಿಯನ್ನು ಉತ್ತಮ ಸಾವಯವ ಗೊಬ್ಬರವನ್ನಾಗಿ ಬಳಸಲಾಗುತ್ತಿದೆ.

ಈ ಮರವು ಮಾರ್ಚ್‌ನಿಂದ ಮೇ ವರೆಗೆ ಹೂ ಬಿಡುತ್ತದೆ, ಮುಂದಿನ ಜನವರಿಯಿಂದ ಮೇ ವರೆಗೆ ಕಾಯಿ ಕೊಯ್ಲು ಮಾಡಬಹುದು. ಒಂದು ಕೆ.ಜಿ.ಗೆ 460-530 ಬೀಜಗಳು ಇರುತ್ತವೆ. ಹೊಂಗೆ ಬೀಜವನ್ನು ಸರಿಯಾದ ರೀತಿಯಲ್ಲಿ ಶೇಖರಣೆ ಮಾಡಿದರೆ, ಒಂದು ವರ್ಷದವರೆಗೆ ಶೇ. 60-85 ರಷ್ಟು ಮೊಳೆಯುವಿಕೆಯ ಸಾಮರ್ಥ್ಯ ಪಡೆದಿರುತ್ತದೆ. ಆದಷ್ಟೂ ಹೊಸ ಬೀಜಗಳನ್ನು ಬಿತ್ತಿದರೆ ತಕ್ಷಣ ಹಾಗೂ ಹೆಚ್ಚಿನ ಮೊಳಕೆಯನ್ನು ನಿರೀಕ್ಷಿಸಬಹುದು.

ಹೊಂಗೆ ಸಸಿಗಳನ್ನು ಬೀಜಗಳಿಂದ ಸುಲಭವಾಗಿ ಬೆಳೆಸಬಹುದು, ಕಾಂಡದ ಕಡ್ಡಿಗಳಿಂದಲೂ ಸಸಿಗಳನ್ನು ಉತ್ಪಾದಿಸಬಹುದು. 8 ರಿಂದ 12  ತಿಂಗಳ ಕಾಲ ಬೆಳೆಸಿದ ಸಸಿಗಳನ್ನು ಜಮೀನಿನಲ್ಲಿ ನೆಡಲು ಬಳಸಬೇಕು. ಸಸಿಗಳನ್ನು ನೆಡುವ ಜಾಗದಲ್ಲಿ 45 x 45  x 45 ಸೆ೦. ಮೀ. ಗುಂಡಿಯನ್ನು ಅಗೆದು ಅದರಲ್ಲಿ ಕೊಟ್ಟಿಗೆ ಗೊಬ್ಬರ, ಕೆಂಪು ಮಣ್ಣು ಮಿಶ್ರಣಮಾಡಿ ಕನಿಷ್ಟ 60 ಸೆ೦. ಮೀ. ಎತ್ತರದ ಗಿಡಗಳನ್ನು ನಾಟಿ ಮಾಡಬೇಕು. ಮರದ ಕಾಂಡ  ನೆಟ್ಟಗೆ ಬೆಳೆಯಲು ಆಗಾಗ್ಗೆ ಅಡ್ಡ ರೆಂಬೆಗಳನ್ನು ತೆಗೆದು ಹಾಕಬೇಕು. ನಮ್ಮ ರಾಜ್ಯದಲ್ಲಿ ಈ ಮರ 7-10ನೇ ವರ್ಷಕ್ಕೆ ಹೆಚ್ಚು ಕಡಿಮೆ 8-9 ಮೀ. ಎತ್ತರ ಬೆಳೆಯುತ್ತದೆ. ಉತ್ತಮ ಇಳುವರಿ ಪಡೆಯಲು ಶೇಕಡ 20-25 ರಷ್ಟು ರೆಂಬೆಗಳನ್ನು ಕತ್ತರಿಸುವುದು ಅವಶ್ಯಕ.

ಕಸಿ ಕಟ್ಟುವಿಕೆ

ಮಾಮೂಲಿಯಾಗಿ ಬೆಳೆಸಿದ ಹೊಂಗೆ ಗಿಡಗಳು ಕಾಯಿ ಬಿಡಲು 7 ವರ್ಷಗಳು ಬೇಕಾಗುತ್ತದೆ, ಆದುದರಿಂದ ಹೊಂಗೆ ಗಿಡಗಳಿಗೆ ಕಸಿಕಟ್ಟುವದರಿಂದ ಬೇಗನೆ ಫಸಲು ಕೊಡಲು ಪ್ರಾರಂಬಿಸುತ್ತವೆ.  ಕಸಿ ಕಟ್ಟಲು ಮೊದಲು ಉತ್ತಮ ಬೇರು ಗಿಡಗಳನ್ನು ಬೆಳಸಿಕೊಳ್ಳಬೇಕು. ನಂತರ, ಉತ್ತಮ ಜಾತಿಯ ತಾಯಿ ಹೊಂಗೆ ಮರದಿಂದ ಕಸಿ ಕಡ್ಡಿಗಳನ್ನು ಆರಿಸಿಕೊಂಡು ಸೂಕ್ತ ಕಸಿ ವಿಧಾನವನ್ನು ಅನುಸರಿಸಿ ಉತ್ತಮ ಕಸಿ ಮಾಡಿದ ಹೊಂಗೆ ಗಿಡಗಳನ್ನು ಪಡೆಯಬಹುದು. ಈ ರೀತಿಯಾಗಿ ಕಸಿ ಮಾಡಿದ ಗಿಡಗಳು ಬೇಗನೆ ಫಸಲು ಕೊಡುವುದಲ್ಲದೆ, ಅಧಿಕ ಇಳುವರಿಯನ್ನೂ ಕೊಡುತ್ತವೆ.

ಯೋಜನೆಯ ಲಾಭಗಳು

  • ಎಣ್ಣೆ ಬೀಜಗಳ ಮಾರಾಟದಿಂದ ರೈತರಿಗೆ ನೇರ ಆರ್ಥಿಕ ಲಾಭ.
  • ಗೃಹ-ಪ್ರಮಾಣದ ಎಣ್ಣೆ-ಉತ್ಪಾದನಾ ಘಟಕದ ಬಳಕೆಯಿಂದ ರೈತರಿಗೆ ಹೆಚ್ಚುವರಿ ಆದಾಯ-ಮಾರಾಟಕ್ಕೆ ಯೋಗ್ಯವಾದ ಗುಣಮಟ್ಟದ ಎಣ್ಣೆ ಹಾಗೂ ಹೊಲಕ್ಕೆ ಉಪಯೋಗಿಸಲು ಹಿಂಡಿ. ಹಿಂಡಿಯ ಬಳಕೆಯಿಂದ ಮಣ್ಣಿನ ಫಲವತ್ತತೆಯಲ್ಲಿ ಹೆಚ್ಚಳ.
  • ವನ ವಿಸ್ತೀರ್ಣದ ಹೆಚ್ಚಳದಿಂದ ಸುಸ್ಥಿರ ಪರಿಸರದ ನಿರ್ಮಾಣ.
  • ಮಣ್ಣು ಮತ್ತು ನೀರಿನ ಸಂರಕ್ಷಣೆಯಲ್ಲಿ ಗಣನೀಯವಾದ ಪಾತ್ರ.
  • ವಾಯು ಮಾಲಿನ್ಯ ಹಾಗೂ ತಾಪಮಾನದಲ್ಲಿ ಇಳಿಮುಖ.
  • ಪೆಟ್ರೋಲಿಯಂ ಇಂಧನದ ಬಳಕೆಯಲ್ಲಿ ಉಳಿತಾಯ ಮತ್ತು ಆಮದು ಮಾಡಿಕೊಳ್ಳಲು ತಗಲುವ ವಿದೇಶಿ ವಿನಿಮಯದಲ್ಲಿ ಗಮನಾರ್ಹ ಉಳಿತಾಯ

ಹಿಪ್ಪೆ

ಸಾಮಾನ್ಯ ಹೆಸರು        :         ಹಿಪ್ಪೆ ಮರ

ಸಸ್ಯಶಾಸ್ತ್ರೀಯ ಹೆಸರು  :         ಮಧುಕ ಇಂಡಿಕ

ಕುಟುಂಬ                    :         ಸಪೋಟೆಸಿ

ಸ್ಥಳೀಯ ಹೆಸರುಗಳು     :         ಕನ್ನಡ – ಹಿಪ್ಪೆ; ಬೆಂಗಾಲಿ, ಹಿಂದಿ, ಗುಜರಾತಿ – ಮಹೂವ; ತಮಿಳು-ಯಲೂಪೈಟ; ತೆಲುಗು – ಇಪ್ಪ.

ಹಿಪ್ಪೆ ಜೈವಿಕ ಇಂಧನಕ್ಕಾಗಿ ಬೆಳೆಯಲು ಒಂದು ಒಳ್ಳೆಯ ಮರ. ಇದನ್ನು ಮಳೆ ಕಡಿಮೆ ಇರುವ ಪ್ರದೇಶಗಳಲ್ಲಿ ತೋಪುಗಳಾಗಿ ಬೆಳೆಸುತ್ತಾರೆ. ಇದನ್ನು ರಸ್ತೆ ಬದಿಯಲ್ಲಿ ಸಾಲು ಮರಗಳಾಗಿ ಬೆಳೆಸುವುದನ್ನು ಕಾಣಬಹುದು. ಈ ಮರವು 500-2500 ಸೆಂ.ಮಿ. ಮಳೆ ಬೀಳುವ ಪ್ರದೇಶ ಹಾಗು 10-40 ಡಿಗ್ರಿ ಸೆಲ್ಷಿಯಸ್ ತಾಪಮಾನದಲ್ಲಿ ಬೆಳೆಯುತ್ತದೆ. ಈ ಮರ ಎಲ್ಲಾ ವಿಧವಾದ ಮಣ್ಣಿನಲ್ಲಿ ಬೆಳೆಯುತ್ತದೆ.

ಈ ಮರದ ಬೀಜದಿಂದ ಎಣ್ಣೆಯನ್ನು ತೆಗೆಯುತ್ತಾರೆ. ಹಿಪ್ಪೆ ಬೀಜದಲ್ಲಿ ಎಣ್ಣೆ ಅಂಶ ಶೇ. 30-35 ರಷ್ಟು ಇರುತ್ತದೆ. ಇದರ ಹಿಂಡಿಯನ್ನು ಬೆಳೆಗಳಿಗೆ ಗೊಬ್ಬರವನ್ನಾಗಿ ಉಪಯೋಗಿಸಬಹುದು. ಈ ಮರದ ಹೂವು, ಹಣ್ಣು, ಎಣ್ಣೆ ಮತ್ತು ತೊಗಟೆಗಳನ್ನು ಅನೇಕ ಬಗೆಯ ಔಷಧಿಗಳಿಗೆ ಉಪಯೋಗಿಸುತ್ತಾರೆ. ಮರದಿಂದ ವ್ಯವಸಾಯದ ಉಪಕರಣಗಳನ್ನು ಮಾಡಬಹುದು. ಹಿಪ್ಪೆ ದೊಡ್ಡ ಮರವಾಗಿ ಬೆಳೆಯುತ್ತದೆ. ಎಲೆಗಳು ಫೆಬ್ರವರಿ-ಏಪ್ರಿಲ್ ತಿಂಗಳ ತನಕ ಉದುರುತ್ತವೆ. ಏಪ್ರಿಲ್ – ಮೇ ತಿಂಗಳಲ್ಲಿ ಹೊಸ ಎಲೆ ಮತ್ತು  ಹೂ ಗಳು ಬರುತ್ತವೆ.  ಸಾಮಾನ್ಯವಾಗಿ ಜೂನ್-ಆಗಸ್ಟ್ ತಿಂಗಳಲ್ಲಿ ಹಣ್ಣುಗಳನ್ನು ಕೊಯ್ಲು ಮಾಡಿ ಎಣ್ಣೆ ತೆಗೆಯಲು ಹಸನು ಮಾಡಬಹುದು. ಬೀಜಗಳಲ್ಲಿ ಹೆಚ್ಚಿನ ಎಣ್ಣೆಯ ಅಂಶವಿರುವುದರಿಂದ ಹೆಚ್ಚು ದಿನವಿಟ್ಟರೆ ಮೊಳಕೆ ಸಾಮರ್ಥ್ಯ ಕಡಿಮೆಯಾಗುತ್ತದೆ.

ಸಸಿಗಳನ್ನು ಬೀಜ ಬಿತ್ತಿ ಬೆಳೆಸಬಹುದು. ಸಸಿಗಳನ್ನು ಪಾಲಿಥೀನ್ ಚೀಲ ಅಥವಾ ಪಾತಿಗಳಲ್ಲಿ ನೆಟ್ಟರೆ ಚೆನ್ನಾಗಿ ಬೆಳೆಯುತ್ತದೆ. ಸುಮಾರು 15-20 ದಿನಕ್ಕೆ ಮೊಳಕೆ ಬರುತ್ತದೆ. ಸಸಿಗಳು 50-60 ಸೆ೦. ಮೀ. ಎತ್ತರಕ್ಕೆ ಬೆಳೆದಾಗ ಭೂಮಿಯಲ್ಲಿ ನೆಡಲು ಯೋಗ್ಯವಾಗಿರುತ್ತವೆ. ಅಂದರೆ, 9-10 ತಿಂಗಳುಗಳಲ್ಲಿ ಸಸಿಗಳನ್ನು ಮುಖ್ಯ ಭೂಮಿಗೆ ನೆಡಬಹುದು. ಹಿಪ್ಪೆ ಮರಗಳನ್ನು 8 x 8 ಮೀ. ದೂರದಲ್ಲಿ ನೆಡುತೋಪು ಅಥವಾ ಸಾಲು ಮರಗಳಾಗಿ ಬೆಳೆಸಬಹುದು. ಈ ಗಿಡಗಳನ್ನು 3-5 ವರ್ಷ ಪೋಷಿಸಬೇಕು. ಹೊಲದ ಅಂಚಿನಲ್ಲಿ ಕೆಲವು ಮರಗಳನ್ನು, ಮನೆಯ ಹಿಂದೆ ಅಥವಾ ಮುಂದೆ ಒಂದೆರೆಡು ಮರಗಳನ್ನು ಬೆಳೆಸಬಹುದು.

ಹಿಪ್ಪೆ ಸಾಮಾನ್ಯವಾಗಿ ಹತ್ತು ವರ್ಷಕ್ಕೆ ಇಳುವರಿ ಕೊಡಲು ಪ್ರಾರಂಭಿಸುತ್ತದೆ. 10 ನೇ ವರ್ಷದಿಂದ ಇಳುವರಿ ಪ್ರಾರಂಭವಾಗಿ ೨೫ನೇ ವರ್ಷದಿಂದ  ಸುಮಾರು 30-40 ಕೆ.ಜಿ. ಬೀಜ ಸಿಗುತ್ತದೆ.

ಕಸಿ ಕಟ್ಟುವಿಕೆ

ಮಾಮೂಲಿಯಾಗಿ ಬೆಳೆಸಿದ ಹಿಪ್ಪೆ ಗಿಡಗಳು ಕಾಯಿ ಬಿಡಲು ೮ ರಿಂದ ೧೦ ವರ್ಷಗಳು ಬೇಕಾಗುತ್ತದೆ, ಆದುದರಿಂದ ಹಿಪ್ಪೆ ಗಿಡಗಳಿಗೆ ಕಸಿಕಟ್ಟುವದರಿಂದ ಬೇಗನೆ ಫಸಲು ಕೊಡಲು ಪ್ರಾರಂಭಿಸುತ್ತವೆ. ಕಸಿ ಕಟ್ಟಲು ಮೊದಲು ಉತ್ತಮ ಬೇರು ಗಿಡಗಳನ್ನು ಬೆಳಸಿಕೊಳ್ಳಬೇಕು. ನಂತರ ಉತ್ತಮ ಜಾತಿಯ ಹಿಪ್ಪೆ ಮರದಿಂದ ಕಸಿ ಕಡ್ಡಿಗಳನ್ನು ಆರಿಸಿಕೊಂಡು ಸೂಕ್ತ ಕಸಿ ವಿಧಾನವನ್ನು ಅನುಸರಿಸಿ ಉತ್ತಮ ಕಸಿ ಮಾಡಿದ ಹಿಪ್ಪೆ ಗಿಡಗಳನ್ನು ಪಡೆಯಬಹುದು. ಈ ರೀತಿಯಾಗಿ ಕಸಿ ಮಾಡಿದ ಗಿಡಗಳು ಬೇಗನೆ ಫಸಲು ಕೊಡುವುದಲ್ಲದೆ, ಅಧಿಕ ಇಳುವರಿಯನ್ನು ಕೊಡುತ್ತವೆ.

ಯೋಜನೆಯ ಲಾಭಗಳು

  • ಎಣ್ಣೆ ಬೀಜಗಳ ಮಾರಾಟದಿಂದ ರೈತರಿಗೆ ನೇರ ಆರ್ಥಿಕ ಲಾಭ.
  • ಗೃಹ-ಪ್ರಮಾಣದ ಎಣ್ಣೆ-ಉತ್ಪಾದನಾ ಘಟಕದ ಬಳಕೆಯಿಂದ ರೈತರಿಗೆ ಹೆಚ್ಚುವರಿ ಆದಾಯ-ಮಾರಾಟಕ್ಕೆ ಯೋಗ್ಯವಾದ ಗುಣಮಟ್ಟದ ಎಣ್ಣೆ ಹಾಗೂ ಹೊಲಕ್ಕೆ ಉಪಯೋಗಿಸಲು ಹಿಂಡಿ. ಹಿಂಡಿಯ ಬಳಕೆಯಿಂದ ಮಣ್ಣಿನ ಫಲವತ್ತತೆಯಲ್ಲಿ ಹೆಚ್ಚಳ.
  • ವನ ವಿಸ್ತೀರ್ಣದ ಹೆಚ್ಚಳದಿಂದ ಸುಸ್ಥಿರ ಪರಿಸರದ ನಿರ್ಮಾಣ.
  • ಮಣ್ಣು ಮತ್ತು ನೀರಿನ ಸಂರಕ್ಷಣೆಯಲ್ಲಿ ಗಣನೀಯವಾದ ಪಾತ್ರ.
  • ವಾಯು ಮಾಲಿನ್ಯ ಹಾಗೂ ತಾಪಮಾನದಲ್ಲಿ ಇಳಿಮುಖ.
  • ಪೆಟ್ರೋಲಿಯಂ ಇಂಧನದ ಬಳಕೆಯಲ್ಲಿ ಉಳಿತಾಯ ಮತ್ತು ಆಮದು ಮಾಡಿಕೊಳ್ಳಲು ತಗಲುವ ವಿದೇಶಿ ವಿನಿಮಯದಲ್ಲಿ ಗಮನಾರ್ಹ ಉಳಿತಾಯ.

ಬೇವು

ಸಾಮಾನ್ಯ ಹೆಸರು           :         ಬೇವಿನ ಮರ

ಸಸ್ಯಶಾಸ್ತ್ರೀಯ ಹೆಸರು     :         ಅಝಾಡಿರೆಕ್ಟಾ ಇಂಡಿಕ

ಕುಟುಂಬ                       :         ಮೀಲಿಯೇಸಿ

ಸ್ಥಳೀಯ ಹೆಸರುಗಳು       :         ಕನ್ನಡ – ಬೇವು ; ಬೆಂಗಾಲಿ, ಹಿಂದಿ – ನೀಮ್‌ಚ್; ತಮಿಳು- ವೆಪ್ಪಮಾರಿನ್; ತೆಲುಗು – ವೇಪ

ಒಣ ಪ್ರದೇಶದಲ್ಲಿ ಬೆಳೆಯುವ ಮರಗಳಲ್ಲಿ ಬೇವು ಅತ್ಯಂತ ಬೆಲೆ ಬಾಳುವ ಮರ. ಬೇವಿನ ಮರದ ಪ್ರತಿಯೊಂದು ಭಾಗವು ಹಲವಾರು ಉಪಯೋಗಕ್ಕೆ ಬರುತ್ತದೆ. ಮರದ ದಿಮ್ಮಿಯನ್ನು ಮನೆ ಕಟ್ಟಲು, ಪೀಠೋಪಕರಣ ಮಾಡಲು, ಬೀಜ ಮತ್ತು ಎಲೆಗಳನ್ನು ಔಷಧವಾಗಿ ಹಾಗೂ ಎಲೆ ಮತ್ತು ಬೀಜದ ಕಷಾಯವನ್ನು ಕೀಟನಾಶಕವಾಗಿ ಉಪಯೋಗಿಸಬಹುದು. ಇವುಗಳ ಜೊತೆಗೆ ಈ ಮರದ ಬೀಜದಿಂದ ಬರುವ ಎಣ್ಣೆಯನ್ನು ಜೈವಿಕ ಇಂಧನವಾಗಿ ಬಳಸಬಹುದು.

ಮಧ್ಯಮ ಗಾತ್ರದ ದೊಡ್ಡ ಮರವಾಗಿದ್ದು, ಜೊತೆಗೆ ಕಡು ಬೂದು ತೊಗಟೆಯು ಮೇಲಿನಿಂದ ಕೆಳಕ್ಕೆ ಮತ್ತು ಓರೆಯಾಗಿ ಸಾಲು ಸೀಳುಗಳನ್ನು ಹೊಂದಿರುತ್ತದೆ. ಎಲೆಗಳು ಸಂಯುಕ್ತ ಅಸಮ ಗರಿ ಪತ್ರಗಳನ್ನು ಹೊಂದಿದ್ದು ತೊಟ್ಟಿನ ಬುಡ ಉಬ್ಬಿರುತ್ತವೆ. ಹೂಗಳು ತೆನೆಗಳ ಮಾದರಿಯಲ್ಲಿ ಚಿಕ್ಕದಾಗಿ ಮತ್ತು ಬಿಳಿ ಬಣ್ಣದ್ದಾಗಿರುತ್ತವೆ. ಕೊಂಬೆಗಳು ಮತ್ತು ಎಲೆಗಳು ಹೊಳಪುಳ್ಳದ್ದಾಗಿರುತ್ತವೆ.

ಈ ಮರವು 450-1200 ಸೆಂ.ಮಿ. ಮಳೆ ಬೀಳುವ ಪ್ರದೇಶ ಹಾಗು 10-45 ಡಿಗ್ರಿ ಸೆಲ್ಷಿಯಸ್ ತಾಪಮಾನದಲ್ಲಿ ಬೆಳೆಯುತ್ತದೆ. ಈ ಮರ ನಿತ್ಯ ಹಸಿರಾದರೂ ಒಣ ಹವೆಯಲ್ಲಿ ಎಲೆಗಳನ್ನು ಉದುರಿಸುತ್ತದೆ. ಸೂರ್ಯನ ಬೆಳಕು ಹೆಚ್ಚು ಇದ್ದ ಕಡೆ ಈ ಮರ ಚೆನ್ನಾಗಿ ಬೆಳೆಯುತ್ತದೆ. ಜೌಗು ಪ್ರದೇಶದಲ್ಲಿ ಬೇವು ಚೆನ್ನಾಗಿ ಬೆಳೆಯುವುದಿಲ್ಲ. ಬೇವು ದೇಶದ ಎಲ್ಲಾ ಪ್ರದೇಶದಲ್ಲಿ ಕಾಣಸಿಗುತ್ತದೆ. ಈ ಮರ ಸಾಮಾನ್ಯ ಮಧ್ಯಮ ಎತ್ತರ ಎಂದರೆ 15-20 ಮೀ. ವರಗೆ ಬೆಳೆಯುತ್ತದೆ. ಅಪರೂಪವಾಗಿ 25 ಮೀ. ಎತ್ತರದ ಮರಗಳನ್ನು ಕಾಣಬಹುದು.  ಸಾಮಾನ್ಯವಾಗಿ ೫ನೇ ವರ್ಷದಿಂದಲೇ ಮಾರ್ಚ್ ನಿಂದ ಮೇ ವರೆಗೆ ಹೂ ಬಿಡಲು ಪ್ರಾರಂಭಿಸುತ್ತದೆ. ಕಾಯಿಗಳು ಜೂನ್‌ನಿಂದ ಪ್ರರಂಭವಾಗಿ ಆಗಸ್ಟ್‌ನಲ್ಲಿ ಕೊನೆಗೊಳ್ಳುತ್ತವೆ ಜುಲೈ-ಆಗಸ್ಟ್‌ನಲ್ಲಿ ಕೊಯ್ಲು ಮಾಡಬಹುದು. ಒಂದು ಕೆ.ಜಿ.ಯಲ್ಲಿ 2500-3000 ಬೀಜಗಳು ಇರುತ್ತವೆ.

ಬೇವಿನ ಬೀಜಗಳನ್ನು ಮರದಿಂದ ಸಂಗ್ರಹಣೆ ಮಾಡಿದ 15 ದಿನಗಳಲ್ಲಿ ಪಾತಿಯಲ್ಲಿ ಅಥವಾ ಪಾಲಿಥೀನ್ ಚೀಲದಲ್ಲಿ ಹಾಕಿದರೆ ಹೆಚ್ಚಿನ ಬೀಜಗಳು ಮೊಳಕೆಯೊಡೆದು ಸಸಿಗಳಾಗುತ್ತವೆ. ಪಾತಿಗೆ ಹಾಕುವ ಮೊದಲು ಹಣ್ಣಿನ ಸಿಪ್ಪೆ ಮತ್ತು ರಸವನ್ನು ಬೀಜದಿಂದ ಬೇರ್ಪಡಿಸಬೇಕು. ಈ ಬೀಜಗಳಿಗೆ ಯಾವುದೇ ಬೀಜೋಪಚಾರದ ಆವಶ್ಯಕತೆ ಇರುವುದಿಲ್ಲ. ಒಂದರಿಂದ ಎರಡು ವಾರದಲ್ಲಿ ಮೊಳಕೆಯೊಡೆದು ಬೆಳೆಯಲು ಪ್ರಾರಂಭಿಸುತ್ತವೆ. ಬೇವಿನ ಸಸಿಗಳು 3-4 ತಿಂಗಳಲ್ಲಿ 15-20 ಸೆ೦.ಮೀ. ಎತ್ತರ ಬೆಳೆಯುತ್ತವೆ. ಒಂದು ವರ್ಷದ ನಂತರ ಈ ಗಿಡಗಳನ್ನು ತೋಪಿನಲ್ಲಿ ಹಾಕಿದರೆ ಗಿಡ ಚೆನ್ನಾಗಿ ಬೆಳೆಯಲು ಅನುಕೂಲಕರ.  ತೋಪಿನಲ್ಲಿ ಗಿಡಗಳನ್ನು ನೆಡುವಾಗ 30 x 30 x 30 ಸೆಂ.ಮೀ. ಗುಂಡಿಗಳನ್ನು ತೆಗೆದು ಅದರಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ಕೆಮ್ಮಣ್ಣು ಹಾಕಿ ನೆಟ್ಟರೆ ಗಿಡ ಚೆನ್ನಾಗಿ ಬೆಳೆಯುವುದು.  ಸಸಿಗಳನ್ನು 5 x 5 ಮೀ. ಅಂತರದಲ್ಲಿ ಬೆಳೆದರೆ ಒಳ್ಳೆಯದು. ಒಂದು ಎಕರೆಗೆ 160 ಬೇವಿನ ಮರಗಳನ್ನು ಬೆಳೆಯಬಹುದು.

ಬೇವು ಸಾಮಾನ್ಯವಾಗಿ 5ನೇ ವರ್ಷದಿಂದ ಕಾಯಿ ಬಿಡಲು ಪ್ರಾರಂಭಿಸುತ್ತದೆ.  ಚೆನ್ನಾಗಿ ಬೆಳೆದ ಮರ 10-12 ವರ್ಷದಲ್ಲಿ 15 ಕೆ.ಜಿ.ಯಷ್ಟು ಬೀಜ ಬಿಡುತ್ತದೆ.  ಬೇವಿನ ಬೀಜದ ತೈಲ ಇಳುವರಿ ಶೇ.28 ರಿಂದ 35 ರಷ್ಟು ಇರುತ್ತದೆ.  ಈಗ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಬೇವಿನ ಬೀಜದ ಬೆಲೆ 3-5 ರೂಪಾಯಿಗಳು.

ಕಸಿ ಕಟ್ಟುವಿಕೆ

ಮಾಮೂಲಿಯಾಗಿ ಬೆಳೆಸಿದ ಬೇವಿನ ಗಿಡಗಳು ಕಾಯಿ ಬಿಡಲು ೪-೫ ವರ್ಷಗಳು ಬೇಕಾಗುತ್ತದೆ, ಆದುದರಿಂದ ಬೇವಿನ ಗಿಡಗಳಿಗೆ ಕಸಿ ಕಟ್ಟುವುದರಿಂದ  ಬೇಗನೆ ಫಸಲು ಕೊಡಲು ಪ್ರಾರಂಬಿಸುತ್ತವೆ. ಕಸಿ ಕಟ್ಟಲು ಮೊದಲು ಉತ್ತಮ ಬೇರು ಗಿಡಗಳನ್ನು ಬೆಳಸಿಕೊಳ್ಳಬೇಕು. ನಂತರ, ಉತ್ತಮ ಜಾತಿಯ ಬೇವಿನ ಮರದಿಂದ ಕಸಿ ಕಡ್ಡಿಗಳನ್ನು ಆರಿಸಿಕೊಂಡು ಸೂಕ್ತ ಕಸಿ ವಿಧಾನವನ್ನು ಅನುಸರಿಸಿ ಉತ್ತಮ ಕಸಿ ಮಾಡಿದ ಬೇವಿನ ಗಿಡಗಳನ್ನು ಪಡೆಯಬಹುದು. ಈ ರೀತಿಯಾಗಿ ಕಸಿ ಮಾಡಿದ ಗಿಡಗಳು ಬೇಗನೆ ಫಸಲು ಕೊಡುವುದಲ್ಲದೆ, ಅಧಿಕ ಇಳುವರಿಯನ್ನು ಕೊಡುತ್ತವೆ.

ಯೋಜನೆಯ ಲಾಭಗಳು

  • ಎಣ್ಣೆ ಬೀಜಗಳ ಮಾರಾಟದಿಂದ ರೈತರಿಗೆ ನೇರ ಆರ್ಥಿಕ ಲಾಭ.
  • ಗೃಹ-ಪ್ರಮಾಣದ ಎಣ್ಣೆ-ಉತ್ಪಾದನಾ ಘಟಕದ ಬಳಕೆಯಿಂದ ರೈತರಿಗೆ ಹೆಚ್ಚುವರಿ ಆದಾಯ-ಮಾರಾಟಕ್ಕೆ ಯೋಗ್ಯವಾದ ಗುಣಮಟ್ಟದ ಎಣ್ಣೆ ಹಾಗೂ ಹೊಲಕ್ಕೆ ಉಪಯೋಗಿಸಲು ಹಿಂಡಿ, ಹಿಂಡಿಯ ಬಳಕೆಯಿಂದ ಮಣ್ಣಿನ ಫಲವತ್ತತೆಯಲ್ಲಿ ಹೆಚ್ಚಳ.
  • ವನ ವಿಸ್ತೀರ್ಣದ ಹೆಚ್ಚಳದಿಂದ ಸುಸ್ಥಿರ ಪರಿಸರದ ನಿರ್ಮಾಣ.
  • ಮಣ್ಣು ಮತ್ತು ನೀರಿನ ಸಂರಕ್ಷಣೆಯಲ್ಲಿ ಗಣನೀಯವಾದ ಪಾತ್ರ.
  • ವಾಯು ಮಾಲಿನ್ಯ ಹಾಗೂ ತಾಪಮಾನದಲ್ಲಿ ಇಳಿಮುಖ.
  • ಪೆಟ್ರೋಲಿಯಂ ಇಂಧನದ ಬಳಕೆಯಲ್ಲಿ ಉಳಿತಾಯ ಮತ್ತು ಆಮದು ಮಾಡಿಕೊಳ್ಳಲು ತಗಲುವ ವಿದೇಶಿ ವಿನಿಮಯದಲ್ಲಿ ಗಮನಾರ್ಹ ಉಳಿತಾಯ.

ಜಟ್ರೋಫಾ

ಸಾಮಾನ್ಯ ಹೆಸರು        :         ತುರಕ ಹರಳು ಅಥವಾ ಕಾಡು ಹರಳು

ಸಸ್ಯಶಾಸ್ತ್ರೀಯ ಹೆಸರು  :         ಜಟ್ರೋಫಾ ಕುರ್ಕಾಸ್

ಕುಟುಂಬ                    :         ಯುರ್ಫೋಬಿಯೇಸಿ

ಸ್ಥಳೀಯ ಹೆಸರುಗಳು    :         ಕನ್ನಡ – ತುರಕ ಹರಳು, ಕಾಡು ಔಡಲ; ಹಿಂದಿ – ಭಾಗ್ಫೇರಂಡ; ತೆಲುಗು – ಅಡವಿ ಆಮುದ.

ಇದು ಮೂಲತಃ ಮೆಕ್ಸಿಕೊ ದೇಶದಿಂದ ಬಂದಿದೆ. ಕಾಫಿ ತೋಟದ ಬೇಲಿಗಳಲ್ಲಿ, ಗುಡ್ಡಗಳಲ್ಲಿ, ಕಲ್ಲುಗಳ ಸಂದುಗಳಲ್ಲಿ, ತಿಪ್ಪೆಯ ಸುತ್ತಾ ತಾನಾಗಿಯೇ ಬೆಳೆಯುತ್ತದೆ.  ಇದರ ಬಗ್ಗೆ ಯಾರೂ ಗಮನ ಹರಿಸದಿದ್ದರೂ ಇದೀಗ ಜೈವಿಕ ಇಂಧನಕ್ಕಾಗಿ ಭಾರೀ ಮಹತ್ವ ಪಡೆದಿದೆ.  ಮೃದು ಕಾಂಡದ ಜಟ್ರೋಫಾ 4-6 ಮೀ. ಎತ್ತರದವರೆಗೆ ಬೆಳೆದು ಹೆಚ್ಚು ಕಡಿಮೆ 45ನೇ ವರ್ಷದ ವರೆಗೆ ಫಲ ಕೊಡುತ್ತದೆ.  ಇದು ಎಲ್ಲಾ ಬಗೆಯ ವಾತಾವರಣದಲ್ಲೂ ಬೆಳೆಯುತ್ತದೆ.  ಒಣಹವೆಯಲ್ಲಿ ಜಟ್ರೋಫಾ ಚೆನ್ನಾಗಿ ಬೆಳೆಯುವುದು. ಈ ಮರದ ಯಾವ ಭಾಗವನ್ನೂ ಪ್ರಾಣಿಗಳು ಮೇಯುವುದಿಲ್ಲ. ಜಟ್ರೋಫಾ ಎಲ್ಲಿ ಹಾಕಿದರೂ ಬೆಳೆಯುವ ಸಾಮರ್ಥ್ಯ ಹೊಂದಿದೆ.

ಟೇರಿ (teri) ವರದಿಯ ಪ್ರಕಾರ ಹೆಚ್ಚಿನ ಪ್ರಮಾಣದಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟ ತೋಪುಗಳಲ್ಲಿ ಇದನ್ನು ವೈಜ್ಞಾನಿಕವಾಗಿ ಬೆಳೆಯುವುದರ ಬಗ್ಗೆ ಮತ್ತು ಉತ್ತಮ ತಳಿಯ ಬಗ್ಗೆಯಾಗಲಿ, ಬೇರೆ ಬೇರೆ ಪ್ರದೇಶದಲ್ಲಿ ಬೆಳೆದ ಬೀಜದ ಎಣ್ಣೆಯ ಪ್ರಮಾಣದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ತಿಳಿಸಿರುತ್ತಾರೆ.  ಆದುದರಿಂದ ಇದನ್ನು ಬೆಳೆಯಲು ಇಚ್ಛಿಸುವವರು ಸರಿಯಾದ ಕಡೆಯಿಂದ ಉತ್ತಮ ಸಸಿಗಳನ್ನು ಪಡೆಯುವುದು ಸೂಕ್ತ.  ರೈತರು ಜಟ್ರೋಫಾವನ್ನು ಬಂಜರು ಭೂಮಿಯಲ್ಲಿ, ಬದುಗಳ ಮೇಲೆ, ಬೇಲಿಯ ಪಕ್ಕದಲ್ಲಿ ಮತ್ತು ರಸ್ತೆಯ ಅಕ್ಕಪಕ್ಕದಲ್ಲಿ ಹಾಕುವುದು ಒಳ್ಳೆಯದು.

ಜಟ್ರೋಫಾ ಸಸಿಗಳನ್ನು ಬೆಳೆಯುವಾಗ ಬೀಜಗಳ ಗುಣಮಟ್ಟಗಳನ್ನು ನೋಡುವುದು ಒಳ್ಳೆಯದು. ಬೀಜದ ಬಣ್ಣ ಕಪ್ಪಾಗಿದ್ದು, ಕವಚ ಬಿರುಕಿಲ್ಲದೆ, ಮೃದುವಾಗಿ ಇರಬೇಕು. ಒಂದು ಬೀಜ ಅಂದಾಜಿನಲ್ಲಿ 2 ಸೆಂ.ಮೀ. ಉದ್ದ 1 ಸೆಂ.ಮೀ. ದಪ್ಪವಿದ್ದು, ಸಾವಿರ ಬೀಜ 450-550 ಗ್ರಾಂ. ತೂಕ ಇದ್ದರೆ ಅಂತಹ ಬೀಜಗಳು ಸಸಿಗಳನ್ನು ಮಾಡಲು ಉತ್ತಮ. ಈ ಗಿಡಗಳನ್ನು ತೋಪು ಮಾಡುವ ಜಾಗದಲ್ಲಿ 30 x 30 ಸೆಂ.ಮೀ. ಗುಂಡಿ ತೆಗೆದು ಕೊಟ್ಟಿಗೆ ಗೊಬ್ಬರ ಮತ್ತು ಕೆಮ್ಮಣ್ಣು ಹಾಕಿ ಎರಡು ಅಡಿ ಎತ್ತರ ಇರುವ ಗಿಡಗಳನ್ನು ನೆಡಬೇಕು. ಇದು ಮಳೆಯಾಶ್ರಿತ ಗಿಡ. ಆದುದರಿಂದ ಮಳೆಗಾಲದ ಪ್ರಾರಂಭದಲ್ಲಿ ಇದನ್ನು ಭೂಮಿಯಲ್ಲಿ ನೆಟ್ಟರೆ ಇದು ಚೆನ್ನಾಗಿ ಬೆಳೆಯಲು ಅನುಕೂಲ. ಸಾಮಾನ್ಯವಾಗಿ ಇದನ್ನು ಒಂದೇ ಬೆಳೆಯಾಗಿ ಬೆಳೆಯುವುದಾದರೆ 3 x 3 ಮೀ. ಅಂತರದಲ್ಲಿ ಬೆಳೆಯಬಹುದು. 2ನೇ/3ನೇ ವರ್ಷದಲ್ಲಿ ಗಿಡದ ಕೆಳರೆಂಬೆಗಳನ್ನು ಕತ್ತರಿಸಿ ಗಿಡ ಪೊದೆಯಾಗುವಂತೆ ಬೆಳೆಸಿದರೆ ಒಳ್ಳೆಯದು.

ಕಾಂಡದಿಂದ ಬೆಳೆಸಿದ ಗಿಡಗಳು 2ನೇ ವರ್ಷದಿಂದ ಕಾಯಿ ಬಿಡಲು ಪ್ರಾರಂಭಿಸುತ್ತವೆ. ಬೀಜದ ಮೂಲದಿಂದ ಬೆಳೆದ ಗಿಡ 3ನೇ ವರ್ಷದಿಂದ ಕಾಯಿ ಬಿಡಲು ಪ್ರಾರಂಭಿಸುವುದು. ಜಟ್ರೋಫಾ ಮರದ ಫಸಲು, ವಾತಾವರಣ ಹಾಗೂ ವಿವಿಧ ಬೇಸಾಯ ಕ್ರಮವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ 6ನೇ ವರ್ಷದಿಂದ ಸ್ಥಿರ ಫಸಲು ಪಡೆಯಲು ಸಾಧ್ಯವಾಗುತ್ತದೆ. ಜಟ್ರೋಫಾ ಸುಮಾರು 40-45 ವರ್ಷದ ವರೆಗೆ ಫಲ ಕೊಡುತ್ತದೆ.

ಹೆಚ್ಚು ರೆಂಬೆಗಳನ್ನು ಪಡೆಯಲು 105, 3.0 ಮತ್ತು 4.5 ಅಡಿಗಳ ಎತ್ತರದಲ್ಲಿ 3 ವರ್ಷಗಳ ಅವಧಿಯಲ್ಲಿ ಕತ್ತರಿಸಬೇಕು.

ಜಟ್ರೋಫಾ ಬೀಜದ ಕವಚವನ್ನು ತೆಗೆದು ಗಾಣದಲ್ಲಿ ಹಾಕಿ ಎಣ್ಣೆ ತೆಗೆದರೆ ಶೇ. 30-35 ರಷ್ಟು ಎಣ್ಣೆ ದೊರೆಯುತ್ತದೆ. ಈ ಎಣ್ಣೆಯನ್ನು ಟ್ರಾನ್ಸೆಸ್ಟೆರಿಫಿಕೇಷನ್‌ಗೆ ಒಳಪಡಿಸಿ ಡೀಸೆಲ್ ಹಾಗೂ ಗ್ಲಿಸೆರಿನ್ ಉತ್ಪಾದಿಸಲಾಗುತ್ತದೆ. ಬೀಜದಿಂದ ಎಣ್ಣೆ ತೆಗೆದ ನಂತರ ಬರುವ ಹಿಂಡಿ ಬೆಳೆಗಳಿಗೆ ಒಳ್ಳೆಯ ಸಾವಯವ ಗೊಬ್ಬರ.

ಸಿಮರೂಬ

ಸಾಮಾನ್ಯ ಹೆಸರು           :         ಸಿಮರೂಬ

ಸಸ್ಯಶಾಸ್ತ್ರೀಯ ಹೆಸರು     :         ಸಿಮರೂಬ ಗ್ಲಾಕ

ಕುಟುಂಬ                       :      ಸಿಮರೂಬೇಸಿ

ಸಿಮರೂಬ ಮರವು ಎಲ್ ಸಲ್‌ವದಾರ್ ದೇಶದ ಮೂಲವಾಗಿದ್ದು ನಮ್ಮ ದೇಶಕ್ಕೆ 1960ರಲ್ಲಿ ಪರಿಚಯಿಸಲಾಯಿತು. ಮೊದಲು ಇದನ್ನು ಅಡಿಗೆ ಎಣ್ಣೆಗಾಗಿ ಬೆಳೆಯಲು ಯೋಜನೆ ರೂಪಿಸಲಾಗಿತ್ತು. ಆದರೆ, ಇದು ನಮ್ಮ ಜನರ ರುಚಿಗೆ ಇನ್ನೂ ಹೊಂದಿಕೊಂಡಿಲ್ಲ.  ಸಿಮರೂಬದ ಬೀಜದಲ್ಲಿ ಸುಮಾರು ಶೇ. 40-50 ರಷ್ಟು ಎಣ್ಣೆಯ ಅಂಶವಿದೆ.

ಈ ಮರವು 7-15 ಮೀ. ಎತ್ತರದ ವರೆಗೆ ಬೆಳೆಯುತ್ತದೆ. ಈ ಮರವು 300-3000 ಸೆಂ.ಮಿ. ಮಳೆ ಬೀಳುವ ಪ್ರದೇಶ ಹಾಗು 10-40 ಡಿಗ್ರಿ ಸೆಲ್ಷಿಯಸ್ ತಾಪಮಾನದಲ್ಲಿ ಬೆಳೆಯುತ್ತದೆ. ಸಿಮರೂಬವನ್ನು ಕಡಿಮೆ ಫಲವತ್ತತೆ ಇರುವ ಪ್ರದೇಶ, ಒಣಭೂಮಿಯಲ್ಲೂ ಸಹ ಬೆಳೆಯಬಹುದು. ಸಿಮರೂಬ ಡಿಸೆಂಬರ್-ಫೆಬ್ರವರಿಯ ವರೆಗೆ ಹೂ ಬಿಡುತ್ತದೆ. ಹಣ್ಣುಗಳು ಫೆಬ್ರವರಿಯಿಂದ ಪ್ರಾರಂಭವಾಗಿ  ಮಾರ್ಚ್- ಏಪ್ರಿಲ್ ವರೆಗೆ ಕೊಯ್ಲು ಮಾಡಬಹುದು. ಕೊಯ್ಲು ಮಾಡಿದ ತಕ್ಷಣ ಹಣ್ಣಿನಿಂದ ಬೀಜಗಳನ್ನು ಬೇರ್ಪಡಿಸಿ ನೆರಳಿನಲ್ಲಿ ಒಣಗಿಸಿ ಎಣ್ಣೆ ತೆಗೆಯಬಹುದು.

ಮೇ-ಜೂನ್ ತಿಂಗಳಲ್ಲಿ ಬೀಜವನ್ನು ಬಿತ್ತಿದರೆ, ಮುಂದಿನ ಜೂನ್‌ನಲ್ಲಿ ಮುಖ್ಯ ಭೂಮಿಯಲ್ಲಿ ಗಿಡಗಳನ್ನು ನಾಟಿ ಮಾಡಬಹುದು. ಸಿಮರೂಬ ಸಸಿಗಳನ್ನು ನೆಡಲು 45 x 45 x 45 ಸೆಂ.ಮೀ. ಗುಂಡಿಗಳನ್ನು ಮಾಡಿ, 5x 5 ಮೀ. ಅಂತರದಲ್ಲಿ ನಾಟಿ ಮಾಡಬೇಕು. ಗಿಡಗಳು ೪ನೇ ವರ್ಷದಿಂದ ಕಾಯಿ ಬಿಡಲು ಪ್ರಾರಂಭಿಸುತ್ತದೆ. ೭ನೇ ವರ್ಷದಿಂದ ಒಂದು ಗಿಡಕ್ಕೆ ಸುಮಾರು 5-10 ಕೆ.ಜಿ. ಬೀಜ ಸಿಗುತ್ತದೆ. ಕಸಿಮಾಡಿದ ಸಸಿಗಳು ನೆಡೆಲು ಬಹಳ ಯೋಗ್ಯ, ಇವು 3ನೇ ವರ್ಷದಲ್ಲಿ ಹೂ, ಕಾಯಿ ಬಿಡಲು ಪ್ರಾರಂಭಿಸುತ್ತವೆ.

ಸಿಮರೂಬದಲ್ಲಿ ಸಾಮಾನ್ಯವಾಗಿ ಮೂರು ವಿಧದ ಮರಗಳಿರುತ್ತವೆ, ಒಂದು ಹೆಣ್ಣು, ಎರಡನೆಯದು ಗಂಡು ಹಾಗೂ ಮೂರನೆಯದು ದ್ವಿಲಿಂಗ ಸಸ್ಯ.

ಸುರಹೊನ್ನೆ

ಸಾಮಾನ್ಯ ಹೆಸರು            : ಸುರಹೊನ್ನೆ

ಸಸ್ಯ ಶಾಸ್ತ್ರೀಯ ಹೆಸರು     : ಕ್ಯಾಲೋಫೈಲಂ ಇನೋಫೈಲಂ

ಕುಟುಂಬ                        : ಕ್ಲೌಸಿಏಸಿಏಇ ಅಥವಾ ಗುಟ್ಟಿಫೆರೇಯಿ

ಸ್ಥಳೀಯ ಹೆಸರುಗಳು        : ಕನ್ನಡ- ಸುರಹೊನ್ನೆ , ಇಂಗ್ಲೀಷ್- ಲಾರೆಲ್ ವುಡ್

ಅಧಿಕ ಮಳೆ ಬೀಳುವ ಪ್ರದೇಶದಲ್ಲಿ ಕಾಡು ಜಾತಿ ಮರವಾಗಿದ್ದು ಇದೊಂದು ಗಟ್ಟಿಯಾಗಿರುವ ಮರವಾಗಿದೆ.  ರಾಜ್ಯದ ಪಶ್ಚಿಮ ಘಟ್ಟಗಳ ಜಿಲ್ಲೆಗಳಲ್ಲಿ ಉತ್ತಮವಾಗಿ ಬೆಳೆಯಬಲ್ಲ ಸಾಮರ್ಥ್ಯವೊಂದಿದ್ದು ಮರವೊಂದರ ಕಾಯಿಗಳಿಂದ ಪಡೆದ ಬೀಜಗಳಿಂದ 11 ಕೆ.ಜಿ. ತೈಲ ಪಡೆಯಬಹುದು.  ಅರಣ್ಯ ಪ್ರದೇಶದಲ್ಲಿ ಇದನ್ನು ಬೆಳೆದಲ್ಲಿ 1 ಹೆಕ್ಟೇರ್ ನಲ್ಲಿ 4,680 ಕೆ.ಜಿ ತೈಲ ಪಡೆಯಬಹುದು.

ಇದು ಬಹುಪಯೋಗಿ ಮರವಾಗಿದ್ದು ಇದರಿಂದ ಪಡೆದ ತೈಲದಿಂದ ಜೈವಿಕ ಡೀಸೆಲ್ ತಯಾರಿಸಬಹುದು.

ಮರದ ಕಟ್ಟಿಗೆಯನ್ನು ದೋಣಿಗಳ ನಿರ್ಮಾಣದಲ್ಲಿ ಹಾಗೂ ಕಟ್ಟಡದ ಸಾಮಾಗ್ರಿಯಾಗಿ ಬಳಸಬಹುದು ಇದರ ಎಣ್ಣೆಯು ಗಾಡ ಹಸಿರು ಬಣ್ಣ ಹೊಂದಿದ್ದು ಔಷಧೀಯ ಗುಣ ಹೊಂದಿರುವುದರಿಂದ ಇದನ್ನು ಕೇಶ ರಕ್ಷಣೆಗಾಗಿ ಸೌಂದರ್ಯವರ್ಧಕವಾಗಿ ಬಳಸುವುದಲ್ಲದೇ ಈ ತೈಲದಲ್ಲಿ ಕೋಶ ಪುನರುತ್ಪಾದಿಸುವ ಶಕ್ತಿ ಹೊಂದಿರುವ ಪ್ರಯುಕ್ತ ವಿಶೇಷವಾಗಿ ತ್ವಚೆ  ಸಂರಕ್ಷಣೆಗಾಗಿ ಬಳಸಲ್ಪಡುತ್ತದೆ.

ಅಲ್ಪಾವಧಿ ಜೈವಿಕ ಇಂಧನ ಬೆಳೆಗಳು

ಪುಂಡಿ (Hemp) ಬೆಳೆಯು ರೈತರಿಗೆ ಹೆಚ್ಚುವರಿ ಆದಾಯ ತರಬಲ್ಲ ಅಲ್ಪಾವದಿ ಬೆಳೆಯಾಗಿದ್ದು, ರಾಜ್ಯದ ಉತ್ತರ ಕರ್ನಾಟಕದ ಭಾಗಗಳಲ್ಲಿ ಇದನ್ನು ಸುಭವಾಗಿ ಬೆಳೆಯಬಹುದಾದ ಬೆಳೆಯಾಗಿದೆ.  ಇದರ  ಎಲೆಗಳನ್ನು ಆಹಾರ ಪದಾರ್ಥವಾಗಿಯೂ ಉಪಯೋಗಿಸುತ್ತಾರೆ.  ಇದು ಬಹು ಬೇಗ ಬೆಳೆಯಬಲ್ಲ ಹಾಗೂ ಅಧಿಕ ಸೊಪ್ಪು ನೀಡಬಲ್ಲ ಬೆಳೆಯಾಗಿದ್ದು ಪ್ರತಿ ಹೆಕ್ಟೇರ್‌ಗೆ ಪ್ರತಿ ವರ್ಷ 25 ಟನ್ ಒಣಪದಾರ್ಥ ನೀಡುವ ಬೆಳೆಯಾಗಿದೆ.  ಈ ಬೆಳೆಯು ಪರಿಸರ ಸ್ನೇಹಿಯಾಗಿದ್ದು ಅತಿ ಕಡಿಮೆ ಕ್ರಿಮಿನಾಶಕ ಹಾಗೂ ಕೀಟನಾಶಕ ಉಪಯೋಗಿಸುವ ಬೆಳೆಯಾಗಿದೆ  ಇದರ ಬೀಜಗಳಲ್ಲಿ ಶೇ. 30-35 ರಷ್ಟು ಎಣ್ಣೆ ಅಂಶ ಹೊಂದಿದೆ.

ಇದು ಬಹು ಉಪಯೋಗಿ ಔಷಧೀಯ ಸಸ್ಯವಾಗಿದೆ. ಇದನ್ನು ವಾತನಿರೋಧಕ ಔಷಧವಾಗಿ ಹಾಗೂ ಎಗ್ಸಿಮಾ ರೋಗದ ಉಪಶಮನಕ್ಕಾಗಿ ಬಳಸುತ್ತಾರೆ. ಇದರ ಎಣ್ಣೆಯಿಂದ ಜೈವಿಕ ಡೀಸೆಲ್ ಉತ್ಪಾದಿಸಲಾಗುತ್ತಿದ್ದು ಇದನ್ನು ಹೆಂಪೋಲೈನ್ ಎಂಬ ಹೆಸರಿನಲ್ಲಿ ಗುರುತಿಸಲಾಗುತ್ತಿದೆ. ಇದರ ಹಿಂಡಿಯನ್ನು ಜೈವಿಕ ಅನಿಲ ಉತ್ಪಾದಿಸಲು ಮತ್ತು ಸಾವಯವ ಗೊಬ್ಬರವಾಗಿ ಉಪಯೋಗಿಸಬಹುದು. ಪುಂಡಿ ದಂಟಿನಲ್ಲಿರುವ ನಾರನ್ನು ಬೇರ್ಪಡಿಸಿ ಇದನ್ನು ಜೂಟ್ ಬ್ಯಾಗ್, ಹಗ್ಗ, ಬಟ್ಟೆ ಹಾಗೂ ಆಟದ ಉಪಕರಣಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಪುಂಡಿ ದಂಟನ್ನು ಉರುವಲಿನ ಇಂಧನವಾಗಿ ಅಲ್ಲದೇ ಕಾಗದ ತಯಾರಿಕಾ ಕಾರ್ಖಾನೆಯಲ್ಲೂ ಸಹ ಬಳಸುತ್ತಾರೆ. ಆದುದರಿಂದ ಪುಂಡಿಯನ್ನು ರೈತರು ತಾವು ಬೆಳೆಯುವ ಆಹಾರ ಬೆಳೆಗಳಾದ ಕಡಲೆಕಾಯಿ (ಶೇಂಗಾ), ಮೆಣಸಿನಕಾಯಿ, ಹೊಗೆ ಸೊಪ್ಪು ಹಾಗೂ ಇತರ ಬೆಳೆಗಳಲ್ಲಿ ಮಧ್ಯಮ ಬೆಳೆಯಾಗಿ ಇದನ್ನು ಬೆಳೆಯಬಹುದು.  ಭೂಮಿಯಲ್ಲಿರುವ ಅಲ್ಪ ತೇವಾಂಶ ಬಳಸಿಕೊಂಡು ಬಹು ಶೀಘ್ರವಾಗಿ ಬೆಳೆಯುವ ಬೆಳೆಯಾಗಿರುವುದರಿಂದ ಮುಂಗಾರು ಕಟಾವಿನ ನಂತರವೂ ಸಹ ಇದನ್ನು ಬೆಳೆಯಬಹುದು.

ಜೈವಿಕ ಇಂಧನದ ಅನುಕೂಲತೆಗಳು

  • ಜೈವಿಕ ಇಂಧನದ ಕಾರ್ಯಕ್ರಮ ಹಲವಾರು ಉದ್ಯೋಗ ಅವಕಾಶಗಳನ್ನು ಒದಗಿಸುವುದರ ಜೊತೆಗೆ, ರೈತರು, ಕೃಷಿ ಕಾರ್ಮಿಕರು ಬಿಡುವಿನ ವೇಳೆಯಲ್ಲಿ ಬೀಜ ಸಂಗ್ರಹಣೆ ಮತ್ತು ಮಾರಾಟದಿಂದ ಅಧಿಕ ಆರ್ಥಿಕ ಲಾಭ ಗಳಿಸಬಹುದು.
  • ಹಲವು ಸಂಶೋಧನೆಗಳಿಂದ ಜೈವಿಕ ಇಂಧನ ಪೆಟ್ರೋಲಿಯಂ ಇಂಧನಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕಾರ್ಬನ್ ಆಕ್ಸೈಡ್‌ಗಳನ್ನು ವಾತಾವರಣಕ್ಕೆ ಬಿಡುತ್ತದೆ ಎಂದು ಕಂಡುಬಂದಿದೆ.
  • ಪೆಟ್ರೋಲಿಯಂ ಇಂಧನ ವಾತಾವರಣಕ್ಕೆ ಕಾರ್ಬನ್ ಡೈಆಕ್ಸೈಡ್‌ನ್ನು ಹೆಚ್ಚಿನ ಪ್ರಮಾಣದಲ್ಲಿ ಸೇರಿಸುತ್ತಾ ಹೋಗುತ್ತದೆ. ಆದರೆ, ಜೈವಿಕ ಇಂಧನ ಸಸ್ಯಗಳು ವಾತಾವರಣದಲ್ಲಿನ ಕಾರ್ಬನ್ ಡೈಆಕ್ಸೈಡ್‌ನ ಕೆಲವು ಭಾಗವನ್ನು ತಾವೇ ಪುನ: ಬಳಸಿಕೊಳ್ಳುತ್ತವೆ.
  • ಜೈವಿಕ ಇಂಧನವು ಪರಿಸರ ಸ್ನೇಹಿ ಹಾಗೂ ನವೀಕರಿಸಬಹುದಾದ ಇಂಧನ.
  • ಇಂಜಿನ್ ಮಾರ್ಪಾಟಿನ ಅಗತ್ಯವಿಲ್ಲ.
  • ಜೈವಿಕ ಇಂಧನದಲ್ಲಿ ಗಂಧಕದ ಪ್ರಮಾಣ ಅತ್ಯಂತ ಕಡಿಮೆ.
  • ಸುರಕ್ಷಿತ ನಿರ್ವಹಣೆ, ಸಂಗ್ರಹಣೆ ಮತ್ತು ಸಾಗಾಣಿಕೆ.
  • ಇಂಜಿನ್‌ನ ಕಾರ್ಯಕ್ಷಮತೆ ಹೆಚ್ಚಿಸಿ, ಇಂಜಿನ್‌ನ ಬಾಳಿಕೆಯನ್ನು ಹೆಚ್ಚಿಸುತ್ತದೆ.
  • ಹೈಡ್ರೋಕಾರ್ಬನ್, ಸುಡದ ಇಂಗಾಲದ ಕಣಗಳ ಉಗುಳುವಿಕೆಯಲ್ಲಿ ಇಳಿಮುಖ.
  • ಜೈವಿಕ ಇಂಧನದ ಮರಗಳನ್ನು ಬೆಳೆಯುವುದರಿಂದ  ಮಣ್ಣಿನ ಸವಕಳಿಯನ್ನು ತಡೆಯಬಹುದು ಮತ್ತು ಮಣ್ಣಿನ ತೇವಾಂಶ ಕಾಪಾಡುವುದರೊಂದಿಗೆ ಆ ಪ್ರದೇಶವನ್ನು ನಿತ್ಯ ಹಸಿರಾಗಿರಿಸಬಹುದು.
  • ಮೂಲ : ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ

    ಕೊನೆಯ ಮಾರ್ಪಾಟು : 2/15/2020



    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate