ಶಿರೋಭ್ರಮಣ (vertigo) /ತಲೆ ಸುತ್ತುವಿಕೆ, ತಲೆ ತಿರುಗುವಿಕೆಯ ಹಲವು ಪ್ರಭೇದಗಳಲ್ಲಿ ಒಂದು. ಕಿವಿಯ ಒಳಭಾಗದಲ್ಲಿರುವ "vestibular apparatus " ಎಂಬ ಅಂಗದ ಕಾರ್ಯಕ್ಷಮತೆ ದೋಷದಿಂದ ಶಿರೋಭ್ರಮಣ ಸಮಸ್ಯೆ ಉಂಟಾಗುತ್ತದೆ. ಪರಿಣಾಮವಾಗಿ ಈ ರೋಗಿಗಳಿಗೆ ತಮ್ಮ ಸುತ್ತಲಿನ ಪರಿಸರ ಒಂದೇ ಸಮನೆ ಭ್ರಮಿಸುತ್ತಿರುವ ಅನುಭವವಾಗುತ್ತದೆ. ಜೊತೆಗೆ ವಾಕರಿಕೆ, ವಾಂತಿ ಮತ್ತು ನಿಯಂತ್ರಣ ತಪ್ಪಿದಂತೆನಿಸಿ ನಿಲ್ಲಲು, ಓಡಾಡಲು ಕಷ್ಟಪಡುತ್ತಾರೆ.
ಹೆಚ್ಚ್ಚಿನ ಪ್ರಕರಣಗಳಲ್ಲಿ ಶಿರೋಭ್ರಮಣಕ್ಕೆ ಯಾವುದೇ ಚಿಕಿತ್ಸೆಯ ಅವಶ್ಯವಿರುವುದಿಲ್ಲ ಮತ್ತು ಅದು ತಂತಾನೇ ಸರಿ ಹೋಗುತ್ತದೆ. ಶಿರೋಭ್ರಮಣ ಯಾವ ವಯೋಮಾನದವರಲ್ಲಿಯೂ ಕಾಣಿಸಿಕೊಳ್ಳಬಹುದು. ಆದರೂ, ಯುವಕರು/ ನಡುವಯಸ್ಸಿನವರಿಗಿಂತ (೧೭%) ಹಿರಿಯರಲ್ಲಿ (೮೦ ವರ್ಷ ಮೇಲ್ಪತ್ತವರಲ್ಲಿ ೩೯%) ಅಧಿಕ ಎಂಬುದು ತಿಳಿದುಬಂದಿದೆ.
ದೇಹದ ಯಾವ ಭಾಗದ ಅನಾರೋಗ್ಯದಿಂದ ಶಿರೋಭ್ರಮಣ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಆಧರಿಸಿ ಇದನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ:
ಅಪಸ್ಮಾರದಿಂದ ನರಳುವವರು, ಕತ್ತಿನ ಭಾಗದ ಮೂಲೆಗಳ ಸವೆತ (spondylosis ), ಮೈಗ್ರೇನ್, ಪರ್ಕಿನ್ಸೋನ್ ಕಾಯಿಲೆ ಮತ್ತಿತರ ನರರೋಗಗಳಿಂದ ನರಳುವವರಲ್ಲಿಯೂ ಈ ರೀತಿಯ ಶಿರೋಭ್ರಮಣ ಕಾಣಿಸಿಕೊಳ್ಳುತ್ತದೆ. ಈ ಗುಂಪಿನ ರೋಗಿಗಳು ಹೆಚ್ಚ್ಹಾಗಿ ತೊದಲು ಮಾತು, ದ್ವಿ-ದ್ರಿಷ್ಟಿ, ಕಣ್ಣಿನ ಸೆಳೆತ ಮತ್ತು ತೀವ್ರ ರೀತಿಯ ಸಮತೋಲನ ತೊಂದರೆ ಅನುಭವಿಸುತ್ತಾರೆ. ಮೆದುಳಿನ ಹಾನಿಯಿಂದಾಗಿ ಕೆಲವರಲ್ಲಿ ನಿಲ್ಲಲೂ, ನಡೆದಾಡಲೂ ಕಷ್ಟವಾಗಬಹುದು. ಇದು ಗುಣವಾಗಲು ಹೆಚ್ಚು ಸಮಯ ಬೇಕು, ಗುಣವಾಗದೆಯೂ ಇರಬ್ಹಹುದು.
ಸಾಮಾನ್ಯವಾಗಿ ವಯಸ್ಸಾದವರಲ್ಲಿ ಒಳ ಕಿವಿಯಲ್ಲಿನ ಮೂಳೆಗಳ ಸವೆತವುಂತಾಗಿ ಬಹುಕಾಲದವರೆಗೆ ಶಿರೋಭ್ರಮಣ ಕಾಡಬಹುದು.
ತಲೆ ಸ್ತುತ್ತುವ ಅನುಭವ ಸಾಮಾನ್ಯವಾದರೂ, ಕೆಲವರಿಗೆ ಸುತ್ತಲಿನ ಪರಿಸರ ತಿರುಗುತ್ತಿರುವಂತೆ ಭಾಸವಾಗುತ್ತದೆ. ಇದಕ್ಕೆ ವೈದ್ಯಲೋಕದಲ್ಲಿ ಅಬ್ಜೆಕ್ಟಿವ್/ವಾಸ್ತವವಾದ ಶಿರೋಭ್ರಮಣ ಎನ್ನುತ್ತಾರೆ. ಕೆಲವರಿಗೆ ತಾವೇ ತಿರುಗುತ್ತಿರುವಂತೆ ಭಾಸವಾಗುತ್ತದೆ. ಇದಕ್ಕೆ ಸುಬ್ಜೆಕ್ಟಿವ್ /ಕಾಲ್ಪನಿಕ ಶಿರೋಭ್ರಮಣ ಎನ್ನುತ್ತಾರೆ. ಕೆಲವೊಮ್ಮೆ ರಕ್ದದೊತ್ತದ ಅಥವಾ ದೇಹದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾದಾಗ (ರಕ್ದದೊತ್ತದ/ ಸಕ್ಕರೆ ಕಾಯಿಲೆಯಿಂದ ನರಳುವವರಲ್ಲಿ ಔಷದಿಯ ಪ್ರಮಾಣ ಹೆಚ್ಚಾದಾಗ ) ಅಥವಾ ಹೃದಯ ಸಂಬಂಧಿ ಕಾಯಿಲೆಯಿನ್ದಲೂ ಈ ತೊಂದರೆ ಕಾಣಿಸುತ್ತದೆ. ಇವರು "ಹುಸಿ ಶಿರೋಭ್ರಮಣ" ದಿಂದ ನರಳುತ್ತಾರೆ. ಈ ರೋಗಿಗಳಲ್ಲಿ ವಾಂತಿ, ವಾಕರಿಕೆ, ಕಿವಿಯಲ್ಲಿ ಗುಯ್ಯಗುಡುವುದು, ತೊದಲು ಮಾತು, ದ್ವಿ-ದೃಷ್ಟಿ ದೋಷವಿದೆಯೇ ಎಂದು ಪರೀಕ್ಷಿಸಲಾಗುತ್ತದೆ . ಇವು ಇಲ್ಲದೆ ಸಮತೋಲನ ತೊಂದರೆ ಮಾತ್ರ ಆಗುತ್ತಿದರೆ " ಹುಸಿ ಶಿರೋಭ್ರಮಣ ವೆಂದು ಪರಿಗಣಿಸಲಾಗುತ್ತದೆ.
ಶಿರೋಭ್ರಮಣದ ಜೊತೆಗೆ ಮೇಲೆ ಹೇಳಿದ ಯಾವುದೇ ಚಿನ್ಹೆಗಲಿದ್ದಲ್ಲಿ ಅದನ್ನನುಸರಿಸಿ ಕಿವಿ ಮತ್ತು ಮೆದುಳಿಗೆ ಸಂಬಂದಪಟ್ಟ ಪರೀಕ್ಷೆಗಳನ್ನು ಮಾಡಿ ಧೃದಪದಿಸಿ ಅದಕ್ಕೆ ತಕ್ಕ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಬಹುತೇಕ ಪ್ರಕರಣಗಳಲ್ಲಿ ಶಿರೋಭ್ರಮಣ ತಂತಾನೇ ಸರಿಹೋಗುತ್ತದೆ.
ರೋಗಿಗೆ ಮಾಹಿತಿ ಮತ್ತು ಧೈರ್ಯ ನೀಡಲಾಗುತ್ತದೆ . ಸಮತೋಲನ ತೊಂದರೆ ಕಾಣಿಸಿಕೊಳ್ಳುವ ಸೂಚನೆ ದೊರೆತಾಗ ಆದಷ್ಟೂ ಜಾಗರೂಕರಾಗಿದ್ದು ವಿಶ್ರಾಂತಿಗೆ ಸೂಚಿಸಲಾಗುತ್ತದೆ. ಕೆಲ ವ್ಯಾಯಾಮಗಲಿನ್ದಲೂ ಇದನ್ನು ತಡೆಯಬಹುದು. ಅಧಿಕ ರಕ್ತದೊತ್ತಡ, ಇನ್ಸುಲಿನ್ ತಗೆದುಕೊಳ್ಳುವ ಮಧುಮೇಹಿ ಗಳು ಮತ್ತು ಹೃದಯ ರೋಗಿಗಳಿಗೆ ಇದರ ಬಗ್ಗೆ ತಿಳಿವಳಿಕೆ ಹೇಳಲಾಗುತ್ತದೆ. ಆದರೆ ಯಾವುದೇ ಕಾರಣಕ್ಕೆ ಸಮತೋಲನ ತೊಂದರೆ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಲು ಸೂಚಿಸಲಾಗುತ್ತದೆ.
ಕೊನೆಯ ಮಾರ್ಪಾಟು : 2/15/2020