অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಜ್ಯೋತಿ ಸಂಜೀವಿನಿ ಯೋಜನೆ

ಜ್ಯೋತಿ ಸಂಜೀವಿನಿ ಯೋಜನೆ

ಕರ್ನಾಟಕ ರಾಜ್ಯ ಆರೋಗ್ಯ  ಇಲಾಖೆಯು ರಾಜ್ಯ ಸರ್ಕಾರಿ ನೌಕರರಿಗಾಗಿ ಉಚಿತ ಚಿಕಿತ್ಸೆಯನ್ನು ನೀಡಲು ಜ್ಯೋತಿ ಸಂಜೀವಿ ಎಂಬ ಯೋಜನೆಯನ್ನು ಜಾರಿಗೆ ತಂದಿದೆ.

ಈ ಯೋಜನೆಯು ಒಳಗೊಳ್ಳುವ ಖಾಯಿಲೆಗಳ ವಿವರಗಳು

ಈ ಯೋಜನೆಯಡಿಯಲ್ಲಿ ೭ ತರಹದ ಗಂಭೀರ ಖಾಯಿಲೆಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ.

ಆ ೭ ಗಂಭೀರ ಖಾಯಿಲೆಗಳೆಂದರೆ

  • ಹೃದ್ರೋಗ
  • ನರರೋಗ
  • ಕ್ಯಾನ್ಸರ್
  • ನವಜಾತ ಶಿಶು & ಚಿಕ್ಕ ಮಕ್ಕಳ ಚಿಕಿತ್ಸೆ
  • ಅಪಘಾತ( ಮರ ಅಥವಾ ಮನೆ ಮೇಲಿಂದ ಬಿದ್ದು ಮೂಳೆ ಮುರಿತಗೊಂಡಾಗ)
  • ಸುಟ್ಟ ಗಾಯ
  • ಮೂತ್ರ ಪಿಂಡದ ಸಮಸ್ಯೆ( ಮೂತ್ರ ಪಿಂಡದ ಕಲ್ಲಿನ ಶಸ್ತ್ರ ಚಿಕಿತ್ಸೆ)

ಈ ೭ ಖಾಯಿಲೆಗಳಿಗೆ ರಾಜ್ಯದ  ಎಲ್ಲಾ ಜಿಲ್ಲಾ ಆಸ್ಪತ್ರೆಗಳು,ಮತ್ತು ಯೋಜನೆಗೆ ನೋಂದಾವಣೆಗೊಂಡ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ (ಖಾಸಗೀ ಆಸ್ಪತ್ರೆ/ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ) ಉಚಿತವಾಗಿ ಚಿಕಿತ್ಸೆ ನೀಡಲಾಗುವುದು.

ಒಟ್ಟಾರೆಯಾಗಿ ೭ ಖಾಯಿಲೆಗಳ ೫೭೨ಕ್ಕೂ ಹೆಚ್ಚು ವಿವಿದ ಬಗೆಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುವುದು.

ಅರ್ಹತೆ:- ೧)ರಾಜ್ಯ ಸರ್ಕಾರಿ ನೌಕರರಾಗಿರಬೇಕು ೨) ಹೆಚ್ ಆರ್ ಎಂ ಎಸ್ ನಲ್ಲಿ ನೌಕರರ ಹಾಗೂ ಅವರ ಕುಟುಂಬದ ಅವಲಂಬಿತರ ಆಧಾರ್ ಸಂಖ್ಯೆಯನ್ನು ನಮೂದಿಸಿರುವುದು ಕಡ್ಡಾಯ ೩) ನೌಕರರ ಕೆ ಜಿ ಐ ಡಿ ಸಂಖ್ಯೆ ಕಡ್ಡಾಯ

ಹೆಚ್ಚಿನ ಮಾಹಿತಿಗಾಗಿ:- ೧೮೦೦೪೨೫೮೩೩೦ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವುದು ಹಾಗೂ ಸಮೀಪದ ತಾಲ್ಲೂಕು ಆಸ್ಪತ್ರೆ/ಸಮುದಾಯ ಆರೋಗ್ಯ ಕೇಂದ್ರ/ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಆರೋಗ್ಯ ಮಿತ್ರರನ್ನು ಭೇಟಿ ಮಾಡುವುದು

ಕೊನೆಯ ಮಾರ್ಪಾಟು : 6/12/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate