ಬೆಳೆಗಳ ಬಿತ್ತನೆಯ ಹಾಗೂ ಬಿತ್ತನೆಯ ನಂತರದ ಸಮಯದಲ್ಲಿ ಸಂಭವಿಸುವ ಯಾವುದೇ ಅಸಾಮಾನ್ಯ, ಅಪ್ರಸನ್ನ ಹಾಗೂ ಆಕಸ್ಮಿಕ ಹವಾಮಾನ ವೈಪರಿತ್ಯಗಳಿಂದ ಸಂಭವಿಸುವ ತೊಂದರೆಗಳನ್ನು ತಪ್ಪಿಸಲು ಸಿದ್ದಪಡಿಸಿದ ಯೋಜನೆ.
ಆಕಸ್ಮಿಕವಾಗಿ ಸಂಭವಿಸುವ ಹವಾಮಾನ ವೈಪರಿತ್ಯಗಳಿಂದ ಉಂಟಾಗುವ ನಷ್ಟವನ್ನು ಸೂಕ್ತವಾದ ತಳಿಗಳು, ಕೃಷಿ ಪದ್ಧತಿ ಮತ್ತು ಸಮಗ್ರ ರೋಗ ನಿರ್ವಹಣ ಪದ್ಧತಿಗಳ ಆಯ್ಕೆ ಮೂಲಕ ಕಡಿಮೆ ಮಾಡಬಹುದು.
ಪರ್ಯಾಯ ಬೆಳೆ ಯೋಜನೆ ಸಂದರ್ಭಗಳು
ಅ) ಮುಂಚಿತವಾಗಿ ಪ್ರಾರಂಭವಾಗುವ ಮುಂಗಾರು : ಕೆಲವು ಸಂದರ್ಭಗಳಲ್ಲಿ ನೈರುತ್ಯ ಮುಂಗಾರು ತಡವಾಗಿ ಪ್ರಾರಂಭವಾಗುತ್ತದೆ. ಆ ಮಳೆಗಾ¯ ಬಿತ್ತನೆಯ ಸಮಯ ಮೀರಿದ್ದು ಕೆಲ ತಳಿಗಳನ್ನು ಬಿತ್ತನೆ ಮಾಡಲಾಗುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಮಧ್ಯಮಾವಧಿ ಅಥವಾ ಅಲ್ಪಾವಧಿ ತಳಿಗಳನ್ನು ಬಿತ್ತನೆಗೆ ಉಪಯೋಗಿಸುವುದು.
ಅ) ಮುಂಗಾರು ಪ್ರಾರಂಭದ ನಂತರ ಮಧ್ಯಭಾಗದಲ್ಲಿ ದೀರ್ಘ ಒಣ/ಬರಗಾಲ ಸಂಭವಿಸುವುದು : ಬೆಳೆಗಳಿಗೆ ನೀರಿನ ಕೊರತೆ ಉಂಟಾಗಿ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಆ) ಮುಂಗಾರು ಅವಧಿಗಿಂತ ಮುಂಚಿತವಾಗಿ ಮುಗಿಯುವುದು : ನಿಗಧಿತ ಅವಧಿಗಿಂತ ಮುಂಚೆ ಮುಂಗಾರು ನಿಂತು ಹೋದರೆ ಬೆಳೆಯಲ್ಲಿ ಕಾಳು ಸರಿಯಾಗಿ ಕಟ್ಟುವುದಿಲ್ಲ. ಮತ್ತು ಬಲಿಯುವುದಿಲ್ಲ ಇದರಿಂದ ಗಣನೀಯವಾಗಿ ಇಳುವರಿ ಕಡಿಮೆಯಾಗುತ್ತದೆ.
ಇ) ಮುಂಗಾರು ಮಳೆ ಮುಂದುವರಿಯುವ ಸಂದರ್ಭ : ಮುಂದುವರಿದ ಮುಂಗಾರುವಿನಿಂದಾಗಿ ಕೊಯ್ಲಿಗೆ ಬಂದ ಬೆಳೆಗಳು ಸರಿಯಾದ ಸಮಯಕ್ಕೆ ಕಟಾವು ಮಾಡಲಾಗುವುದಿಲ್ಲ. ಹಾಗೂ ಕಟಾವಾದ ಬೆಳೆಗಳು ಕೂಡ ಮಳೆಯಿಂದ ಹಾನಿಗೊಳಗಾಗುತ್ತವೆ. ಇದರಿಂದಾಗಿ ಹೆಚ್ಚಿನ ನಷ್ಟ ಸಂಭವಿಸುತ್ತದೆ.
ಈ) ಅತಿವೃಷ್ಟಿ/ಅನಾವೃಷ್ಟಿ ಸಂಭವಿಸಿದಾಗ : ಬೆಳೆಯ ವಿವಿಧ ಹಂತದಲ್ಲಿ ಅತಿಯಾದ ಮಳೆ ಅಥವಾ ಮಳೆಯ ಪ್ರಭಾವದಿಂದ ಬೆಳೆಗಳ ಬೆಳವಣಿಗೆ, ಇಳುವರಿ ಹಾಗೂ ಕೃಷಿಗೆ ಪೂರಕವಾದ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ.
ಈ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಕೃಷಿ ಹವಾಮಾನ ವಿಭಾಗವು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಸೂಕ್ತವಾದ ಪರ್ಯಾಯ (ಅನಿಶ್ಚಿತ) ಬೆಳೆಯೋಜನೆಯನ್ನು ಸಿದ್ದಪಡಿಸಿದೆ. ಈ ಯೋಜನೆಗಳು ಕೆಳಕಂಡ ಮಾಹಿತಿಗಳನ್ನು ಒಳಗೊಂಡಿರುತ್ತದೆ.
ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ. ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು
ಕೊನೆಯ ಮಾರ್ಪಾಟು : 2/15/2020