অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

‘ಶ್ರೀ‘

ಶ್ರೀ ಎಂದರೇನು?

  1. ಭತ್ತದ ಬೇಸಾಯ;ಕೆಲವು ಕಟ್ಟು ಕಧೆಗಳು.( ತಪ್ಪು ಅಭಿಪ್ರಾಯಗಳು)ಭತ್ತವು ಒಂದು ಜಲಚರ (ನೀರಿನಲ್ಲಿ ಬೆಳೆಯವ) ಸಸ್ಯ ಮತ್ತು ನಿಂತ ನೀರಿನಲ್ಲಿ ಅತ್ಯುತ್ತಮವಾಗಿ ಬೆಳೆಯುತ್ತದೆಂದು ಎಲ್ಲರು ನಂಬುತ್ತಾರೆ. ಭತ್ತವು ಜಲಚರ ಸಸ್ಯವಲ್ಲ; ಇದು ನೀರಿನಲ್ಲಿ ಬದುಕಬಲ್ಲದು ಆದರೆ ಕ್ಷೀಣಿಸಿದ ಆಮ್ಲಜನಕ ಮಟ್ಟದಲ್ಲಿ ವೃದ್ದಿ ಹೊಂದುವುದಿಲ್ಲ. ಸದಾ ನಿಂತ ನೀರಿನ ಪರಿಭತ್ತವು ತನ್ನ ಅಧಿಕ ಶಕ್ತಿಯನ್ನು ಬೇರುಗಳಲ್ಲಿ ಗಾಳಿಯನ್ನು ಹೀರಿಕೊಳ್ಳ ಬಲ್ಲ ಜೀವ ಕೋಶಗಳನ್ನು ಏರ್  ಪಾಕೆಟ್ಸ್  (ಅಎರ್ಂಚ್ಯ್ಮ  ಟಿಶ್ಯೂ ) ಅಭಿವೃಧ್ದಿ ಗೊಳಿಸಲು ವೆಚ್ಚಿಸುತ್ತದೆ (ಕಳೆಯತ್ತದೆ). ಸುಮಾರು ಶೇ.೭೦ ರಷ್ಟ ಭತ್ತದ ತುದಿಗಳು ಹೊವು ಬಿಢುವ ಹಂತದೊತ್ತಿಗೆ ನಿಷ್ರಿಯಗೊಳ್ಳುವೆ(ಅವನತಿಹೊಂದುತ್ತದೆ).
  2. ಶ್ರೀ : ದೆಬುನ್ಕಿಂಗ್  ಮ್ಯ್ಥ್ಸ್ ‘‌ಶ್ರೀ‘ ;ಪಧ್ದತಿ; ತಪ್ಪು ಅಭಿಪ್ರಾಯಗಳನ್ನು ಹೋಗಲಾಡಿಸಿವುದು ಶ್ರೀ ಪಧ್ದತಿ (ಹೊಂ) ತಾಕುಗಳಲ್ಲಿ ನೀರನ್ನು ನಿಲ್ಲಿಸುವುದಿಲ್ಲ ಆದರೆ ಬೆಳೆ ಬೆಳವಣಿಗೆ ಹಂತದಲ್ಲಿ ಭೂಮಿಯ ಮೇಲಿನ ತೇವ ಆರದಂತೆ ನೋಡಿಕೊಳ್ಳಲಾಗುತ್ತದೆ. ನಂತರದ ಹಂತದಲ್ಲಿ ಒಂದು ಇಂಚಿನಷ್ಟು ನೀರನ್ನು ನಿಲ್ಲಿ ಸಲಾಗುವುದು. ‘ಶ್ರೀ‘ ಪಧ್ದತಿಯಲ್ಲಿ ಭತ್ತ ಬೆಳೆಯಲು ನೀರಾವರಿಯಲ್ಲಿ ಭತ್ತ ಬೆಳೆಯಲು ಬೇಕಾಗುವ ನೀರಿನಲ್ಲಿ ಅರ್ಧದಷ್ಟಾದರೆ ಸಾಕು. ಪ್ರಪಂಚ ದಾದ್ಯಂತ ಪ್ರಸ್ತುತ ಒಂದು ಲಕ್ಷಕ್ಕೊ ಅಧಿಕ ಮಂದಿ ರೈತರು ಪ್ರಯೋಗತ್ಮಕವಾಗಿ ಈ ಪಧ್ದತಿಯಲ್ಲಿ ಭತ್ತವನ್ನು ಬೆಳೆಯುತ್ತಿದ್ದಾರೆ. ಶ್ರೀ ಪದ್ದತಿಯಲ್ಲಿ ಭತ್ತವನ್ನು ಬೆಳೆಯಲು ನೀರು ಕಡಿಮೆ ಬೇಕಾಗುತ್ತದೆ ಖರ್ಚು ಕಡಿಮೆ ತಗಲುತ್ತದೆ ಹಾಗೊ ಈ ಪಧ್ದತಿಯಲ್ಲಿ ಅಧಿಕ ಇಳುವರಿಪಡೆಯಬಹುದು. ಆದುದರಿಂದ ಇದು ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ತುಂಬಾ ಪ್ರಯೋಜನಕಾರಿ .೧೯೮೦ ರಲ್ಲಿ ಮೊಟ್ಟ ಮೊದಲ ಬಾರಿಗೆ ‘ಶ್ರೀ‘ ಪಧ್ದತಯನ್ನು ಮಡಗಾಸ್ಕರ್ನಲ್ಲಿ ಅಭಿವೃದ್ದಿ ಗೊಳಿಸಲಾಯಿತು(ಕಂಡು ಹಿಡಿಯಲಾಯಿತು). ಈ ಪಧ್ದತಿಯ ಸಾಧ್ಯೆಯನ್ನು ಚೀನ, ಇಂಡೋನೇಷಿಯ, ಕಾಂಬೋಡಿಯಾ ಧೈಲ್ಯಾಂಡ್,ಬಂಗ್ಲಾದೇಶ, ಶ್ರೀಲಂಕಾ ಮತ್ತು ಭಾರತದಲ್ಲಿ ಪರೀಕ್ಷಿಸಲಾಗುತ್ತದೆ. ಖರೀಷ್ ೨೦೦೩ರಲ್ಲಿ ‘ಶ್ರೀ‘ಪಧ್ದತಿಯನ್ನು ಆಂಧ್ರಪ್ರದೇಶದ ಎಲ್ಲಾ ೩೩ ಜಿಲ್ಲೆಗಳಲ್ಲಿ ಪರೀಷಿಸಿ, ಉತ್ತೇಜನಕಾರಿ ಫಲಿತಾಂಶಗಳನ್ನು ಪಡೆಯಲಗಿದೆ.
  3. ‘ಶ್ರೀ‘ ತಂತ್ರ ಙನವು ಕಡಿಮೆ ಬಾಹ್ಯ ಪರಿಕರಗಳನ್ನು ಉಪಯೋಗಿಸುತ್ತದೆ.ಶ್ರೀ ಪದ್ದತಿಯಲ್ಲಿ ಭತ್ತ ಬೆಳೆಯಲು ಕೇವಲ ೨ ಕೆ.ಜಿ. ಬೀಜ ಸಾಕು. ಆದ್ದರಿಂದ ನಿರ್ದಿಷ್ಟ /ಪ್ರದೇಶದಲ್ಲಿ ಸಸ್ಯಗಳ ಸಂಖ್ಯೆ ಕಡಿಮೆಯಿರುತ್ತದೆ {೨೫ *೨೫ ಸೆಂ.ಮೀ.} ಸಾಮಾನ್ಯ ವಾಗಿ ರಾಸಾಯಿನಕ ಪಧ್ದತಿಯಲ್ಲಿ ಭತ್ತ ಬೆಳೆಯಲು ಪ್ರತಿ ಎಕರೆಗೆ ೩೦ ಕೆ.ಜಿ. ಬೀಜ ಬೇಕಾಗುತ್ತದೆ.
  4. ವಿವರಣಗಳು

    ಸಾಮಾನ್ಯ ಪಧ್ದತಿ

    ಶ್ರೀ ಪಧ್ದತಿ

    ಅಂತರ

    ೧೫  ಸೆಂ. ಮಿ*೧೦ ಸೆಂ.ಮೀ

    ೨೫ ಸೆಂ.ಮೀ.* ೨೫ ಸೆಂ.ಮೀ

    ಸಸ್ಯಗಳ ಸಂಖ್ಯೆ ಪ್ರತಿ ಚ.ಮೀ

    ೬೬

    ೧೬

    ಸಸ್ಯಗಳ ಸಂಖ್ಯೆ ಪ್ರತಿನಾಟಿಸ್ಧಳದಲ್ಲಿ

    ಸಸ್ಯಗಳ ಸಂಖ್ಯೆ ಪ್ರತಿ ಎಕರೆಗೆ

    ೭೯೨೦೦೦

    ೬೪೦೦೦

    ಬಿತ್ತನೆ  ಬೀಜ ಪ್ರತಿ ಎಕರೆಗೆ

    ೨೦ ಕೆ.ಜಿ.

    ೨ ಕೆ.ಜಿ.

  5. ‘ಶ್ರೀ‘ ಪಧ್ದತಿಯಲ್ಲಿ ರಾಸಾಯನಿಕ ಗೊಬ್ಬರ ಮತ್ತು ಸಸ್ಯ ಸಂರ ಕ್ಷಣೆ ರಾಸಾಯನಿಕಗಳ ಮೇಲೆ ಕಡಿಮೆ ಖರ್ಚಿಗುತ್ತದೆ.
  6. ಬೇರಿನ ಬೆಳವಣಿಗೆ.ಸಹಜ ಪರಿಸ್ಧಿತಿಯಲ್ಲಿ ಶ್ರೀ ಪಧ್ದತಿ ಭತ್ತವು ಆರೋಗ್ಯವಾಗಿ ಬೆಳೆಯುತ್ತದೆ. ಮತ್ತು ಬೇರಿನ ಬೆಳೆವಣಿಗೆಯ ಸದೃಢವಾಗಿ ರುತ್ತದೆ.ಮಣ್ಣಿನ ಆಳವಾದ ಕುದರುಗಳಿಂದಲೂ ಸಹ ಪೋಷಕಾಂಶಗಳನ್ನುಪಡೆದುಕೊಳ್ಳವ ಶಕ್ತಿಯನ್ನು ‘ಶ್ರೀ ‘ಪದ್ದತಿ ಭತ್ತಕ್ಕಿರುತ್ತದೆ.
  7. ಆರಂಭದಲ್ಲಿ ಶ್ರೀ ಪಧ್ದತಿಯಲ್ಲಿ ಕೆಲಸ ಹೆಚ್ಚ.ನಾಟಿ ಮಾಡಲು ಮತ್ತು ಕಳೆ ತೆಗೆಯಲು ಶೇ.೫೦ ರಷ್ಟು ಹೆಚ್ಚಿನ ಕೆಲಸ ಗಾರರು ಬೇಕು ಕಡಿಮೆ ಸಂಪನ್ಮೂಲಗಳನ್ನು ಹೊಂದಿರುವ ಕುಟುಂಬದಲ್ಲಿ ಹೆಚ್ಚಿನ ಕಲಸಗಾರವವರಿಗೆ ಒಂದು ಉತ್ತಮ ಪರ್ಯಯ ಪಧ್ದತಿ .ಒಮ್ಮೆ ಸರಿಯಾದ ಕೌಶಲ್ಯವನ್ನು ಕಲೆತ ಅಳವಡಿಸಿಕೊಂಡರೆ ಕೊಲಿ ಖರ್ಚು ಕಡಿಮೆಯಾಗುತ್ತದೆ.
  8. ‘ಶ್ರೀ’ ಪಧ್ದತಿಯಲ್ಲಿ ಭತ್ತವನ್ನು ಆರೋಗ್ಯವಾಗಿ ಬೆಳೆಯಲು ಕಾರಣಗಳು
    • ಆಳವಾದ ಮತ್ತು ದಟ್ಟವಾದ ಬೇರುಗಳು
    • ಯಧೇಷ್ಟ ಮತ್ತು ಬಲವಾದ ಕವಲುಗಳು/ತೆಂಡೆಗಳು
    • ನೆಲಕ್ಕೆ ಬಾಗದಿರುವುದು
    • ದೂಡ್ಡ ಗಾತ್ರದ ತೆನೆಗಳು
    • ತೆನೆಗಳಲ್ಲಿ ಚೆನ್ನಾಗಿ ತುಂಬಿದ ಕಾಳುಗಳು,ಮತ್ತು

    ಸಹಜವಾಗಿ ಮಣ್ಣಿನಿಂದ ಪೋಷಕಾಂಶಗಳನ್ನು ತೆಗೆದು ಕೋಳ್ಳವುದರಿಂದ ಕೀಟಗಳ ಹಾವಳಿಗೆ ನಿರೋಧಕ ಶಕ್ತಿ ಹೊಂದಿರುತ್ತದೆ.

  9. ತೆಂಡೆಗಳು/ ಕವಲುಗಳ ಸಂಖ್ಯೆ ಹೆಚ್ಚಳ, ಸಾಧಾರಣವಾಗಿ ಪ್ರತಿ ಸಸ್ಯದಿಂದ ೩೦ ಕವಲುಗಳನ್ನು ಕಾಣಬಹುದು. ಪ್ರತಿ ಸಸ್ಯದಿಂದ ೫೦ ಕವಲುಗಳನ್ನು ಸಹ ಸುಲಭವಾಗಿ ಪಡೆಯಬಹುದು.ಬೇಗ ನಾಟಿ ಮಾಡುವುದರಿಂದ ಮತ್ತು ಆರೋಗ್ಯಕರ ಬೇರುಗಳಿಂದ ೧೦೦ ಕ್ಕೊ ಅಧಿಕ ಕವಲುಗನ್ನು ಸಾಧಿಸಬಹುದು.

    ಶ್ರೀ ಪಧ್ದತಿಯಲ್ಲಿ ವಹಿಸಬೇಕಾದ ಜಾಗ್ರತೆಗಳು

  10. ಶ್ರೀ ಪಧ್ದತಿಯಲ್ಲಿ ಪಾಲಿಸಬೇಕಾದ ಜಾಗೂರುಕತೆಗಳು
    1. ಬೇಗ ನಾಟಿ ಮಾಡುವುದು; ಎರಡು ಎಲೆಗಳನ್ನು ಹೊಂದಿದ ೮ ರಿಂದ೧೨ ದಿನಗಳ ವಯಸ್ಸಿನ ಸಸಿಯನ್ನು ನಾಟೆ ಮಾಡುವುದು .( ಅಧಿಕ ಕವಲುಗಳು ಮತ್ತು ಬೇರು ಬೆಳವಣಿಗೆಯ ಸಾಮಧ್ಯಾ)
    2. ಜಾಗೂರೂ ಕತೆಯಿಂದ ನಾಟಿ ಮಾಡುವುದು ನಾಟಿ ಮಾಡುವಾಗ ಆಗುವ ಪೆಟ್ಟನ್ನು ಕಡಿಮೆ ಮಾಡಿ. ಸಸಿಯನ್ನು ಬೀಜ, ಸ್ವಲ್ಪ ಮಣ್ಣು ಮತ್ತು ಬೇರುಗಳು ಬರುವಂತೆ ಸಸಿ ಮಡಿಯಿಂದ ಸೂಕ್ಷ್ಮವಾಗಿ ಕೀಳಬೇಕು. ಮಣ್ಣಿನಲ್ಲಿ ಬಹಳ ಆಳವಾಗಿ ನಾಟಿ ಮಾಡಿ ಬಾರದು. (ಅಧಿಕ ಬೇರು ಬೆಳವಣೆಗೆಯ ಸಾಮರ್ಧ್ಯ)
    3. ಹೆಚ್ಚನ ಅಂತರ; ಸಾಲಿನಿಂದ ಸಾಲಿಗೆ ೨೫ ಸೇ. ಮಿ. ಸಸ್ಯಿದಿಂದ ಸಸ್ಯಕ್ಕೆ ೨೫ ಸೇ.ಮಿ. ಅಂತರದಲ್ಲಿ ಒಂದೊಂದೇ ಸಸಿಯನ್ನು ನಾಟಿ ಮಾಡ ಬೇಕು .( ಅಧಿಕ ಬೇರು ಬೆಳವಣಿಗಯ ಸಾಮರ್ಧ್ಯ)
    4. ಕಳೆ ನಿರ್ವಹಣೆ ಮತ್ತು ಬೇರುಗಳಿಗೆ ಗಾಳಿಯಾಡುವಿಕೆ ಸರಳ ವಾದ ತಿರುಗವ ವೀಡರ್ ಯಂತ್ರದಿಂದ ೨ ಸಾರಿ ಕಳೆಯನ್ನು ತೆಗೆಯವುದು ಅವಶ್ಯಕ. ಇದರಿಂದ ಮಣ್ಣು ಚೆನ್ನಾಗಿ ಕದಡಿದಂತಾಗುತ್ತೆ. (ಅಧಿಕ ಕಳೆಗಳ ನಿರ್ವಹಣೆಯಿಂದ ಮತ್ತು ಬೇರುಗಳಿಗೆ ಉತ್ತಮ ಗಾಳಿಯಾಡುವುದರಿಂದ ಬೇರಿನ ಆಮ್ಲಜನಕ ಮತ್ತು ಸಾರಜನಕದ ಲಭ್ಯತೆ ಹೆಚ್ಚಾಗುತ್ತದೆ) ೨ ಎರಡ ಕ್ಕಿಂತ ಹೆಚ್ಚು ಸಾರಿ ಕಳೆ ತೆಗೆಯವುದರಿಂದ ಉತ್ಪಾದಕತೆ ( ೨ ಟನ್ನು ಗಳು/ ಹೆಕ್ಟರಿಗೆ) ಹೆಚ್ಚಾಗುವ ಸಾಧ್ಯತೆ ಇದೆ.
    5. ನೀರಿನ ನಿರ್ವಣೆ ಮಣ್ಣಿನಲ್ಲಿ ತೇವಾಂಶವಿರುವಂತೆ ಆದರೆ ನೀರು ನಿಲ್ಲದಂತೆ ನಿಯಮಿತವಾಗಿ ನೀರನ್ನು ಕೊಡಬೇಕು. ಆಗಾಗ್ಗೆ ನೀರು ಕೊಡುವುದನ್ನು ನಿಲ್ಲಿಸಿ ಮಣ್ಣನ್ನು ಒಣಗಸ ಬೇಕು. ಇದರಿಂದ ಕೊಡ ಬೇರುಗಳಿಗೆ ಗಾಳಯ ಹೆಚ್ಚಾಗಿ ಸಿಗುತ್ತದೆ. (ಅಧಿಕ ಬೇರುಗಳ ಬೆಳವಣಿಗೆ ಎಕೆಂದರೆ ಇದು ಬೇರುಗಳನ್ನು ಕೆಟ್ಟು ಹೋಗುವುದಕ್ಕೆ ಬಡುವುದಿಲ್ಲ .ಇದರ ಜೊತೆಗೆ ಅಧಿಕ ಪೊಷಕಾಂಶಗಳನ್ನು ತೆಗೆದು ಕೊಳ್ಳವ ಸಾಮರ್ಧ್ಯ ಸಸ್ಯಕ್ಕೆ ಬರುತ್ತದೆ.
    6. ಸಾವಯವ ಗೊಬ್ಬರ ( ಕಾಂಪೋಸ್ಟ ರಸಾಯನಿಕ ಗೊಬ್ಬರಗಳ ಜೊತೆಗೆ. ಹಾಕ ಬೇಕಾಗುತ್ತದೆ. ಮಣ್ಣಿನ ಭೌತಿಕ ಲಕ್ಷಣ ಗಳ ಸುಧಾರಣೆ ಮತ್ತು ಸಮತೋಲನವಾದ ಪೋಷಕಾಂಶಗಳನ್ನು ಒದಗಿಸುವುದರಿಂದ ಭತ್ತದ ಬೆಳವಣಿಗೆಯ ಉತ್ತಮ ಗೊಳ್ಳತ್ತದೆ. ಶ್ರೀ ಪಧ್ದತಿಯಲ್ಲಿ ೪ ರಿಂದ ೧೨ ದಿನಗಳ ಸಸಿಯನ್ನು ನಾಟಿ ಮಾಡಲಾಗುವುದು. ಇದರಿಂದ ಬೇರಿನ ಬೆಲವಣಿಗೆಯ ಉತ್ತಮಗೊಂಡು ೩೦ ರಿಂದ ೫೦ ತೆಂಡೆಗಳು ಬರುತ್ತದೆ. ಮೇಲೆ ತಿಳಿಸಿದ ಎಲ್ಲಾ ಆರು ಪಧ್ದತಿ ಗಳನ್ನು ನಿರ್ವಹಣೆ ಮಾಡಿದಲ್ಲಿಜ, ೫೦ ರಿಂದ ೧೦೦ ರ ವರೆಗೆ ತೆಂಡೆಗಳು ಬ ರಲು ಅವಕಾಶಾ ವಾಗುತ್ತದೆ.ಮತ್ತು ಅಧಿಕ ಇಳುವರಿಯನ್ನು ಪಡೆಯ ಬಹುದು.
  11. ಸಸಿಯ ನಿರ್ವಹಣೆ.
    • ಬಿತ್ತಗೆ ಬೀಜ ೨ ಕೆ.ಜಿ ವರೆಗೆ
    • ಸಸಿ ಮಡಿಯ ವಿಸ್ತೀಣ; ೧ ಸೆಂಟು ೧ ಎಕರೆಗೆ
    • ಆರೋಗ್ಯ ವಾದ ಸಸಿಗಳನ್ನು ಮಾತ್ರ ಆಯ್ಕೆ ಮಾಡಿ
    • ಮೊಳಕೆಯೊಡದ ಬೀಜ ಗಳನ್ನು ಎತ್ತರದ ಸಸಿ ಮಡಿಯಲ್ಲಿ ಬಿತ್ತನೆ ಮಾಡಿ.
    • ತೋಟಗಾರಿಕೆ ಬೆಳೆಗಳಲ್ಲಿ ಮಾಡಿದಂತೆ ಎತ್ತರದ ಸಸಿ ಮಡಿಗಳನ್ನು ತುಯಾರು ಮಾಡಿ.
    • ನುಣುಪಾದ ಸಾವಯವ ಗೊಬ್ಬರವನ್ನು ಒಂದು ಪದರು ಹಾಕಿ.
    • ಮೊಳಕೆಯೊಡೆದ ಬೀಜಗಳನ್ನು ಸಮಾನವಾಗಿ ಹರಡಿ.
    • ಇನ್ನೊಂದು ಪದರು ಸಾವಯವ ಗೊಬ್ಬರವನ್ನು ಹಾಕಿ.
    • ಭತ್ತದ ಹುಲ್ಲಿನೊಂದಿಗೆ ಹೊದಿಕೆ ಮಾಡಿ.
    • ಜಾಗ್ರತೆಯಿಂದ ನೀರನ್ನು ಹಾಕಿ. ರೋಸ್ ಕ್ಯಾನ್ ಬಳಸವುದು ಉತ್ತಮ
    • ಬಾಳೆ ಎಲೆಯ ಕವಚಗಳನ್ನು ಸಸಿಯನ್ನು ಸುಲಭವಾಗಿ ಕೀಳಲು ಮತ್ತ ಕೂಂಡುಯೂಲು ಬಳಸಿ.
  12. ಮುಖ್ಯ ಜಮೀನಿನ ತಯಾರಿ
    • - ಸಮಾನ್ಯ ಪಧ್ದತಿಯಲ್ಲಿ ಮಾಡುವ ಭೂಮಿ ತಯಾರಿಗಿಂತ ವಿಭಿನ್ನವಾಗಿಲ್ಲಿ
    • ಭೂವಿಯನ್ನು ಜಾಗ್ರತೆಯಿಂದ ಸಮ ತಟ್ಟುಗೊಳಿಸಿ ಇದರಿಂದ ನೀರಿನನ ನಿಹಣೆ
    • - ಸುಲಭವಾಗುತ್ತದೆ.
    • - ಪ್ರತಿ ೩ ಮೀಟರ್ ಅಂತರದಲ್ಲಿ ಒಂದು ಬಿಸಿಗಾಲುವೆಯನ್ನು ಮಾಡಿ ‘ ಮಾರ್ಕರ್‘ ‘ಸಹಾಯದಿಂದ ಎರೆಡೂ ದಿಕ್ಕುಗಳಲ್ಲಿ ೨೫ ಸೇ, ಮೀ* ೨೫ ಸೇ.ಮಿ ಗುರುಗಳನ್ನು ಗೆರೆಗಳನ್ನು ಮಾಡಿ. ಎರಡು ಗೆರೆಗಳು ಸಂಧಿಸುವ ಜಾಗದಲ್ಲಿ ನಾಟಿ ಮಾಡಿ

    ನಾಟಿ ಮಾಡುವುದು

    • ೮ ರಿಂದ ೧೨ ದಿನಗಳ ಸಸಿಯನ್ನು ನಾಟಿ ಮಾಡ ಬೇಕು.
    • ಸಸಿಗಳನ್ನು ಕೀಳುವ ಮತ್ತು ನಾಟಿ ಮಾಡುವ ಸಂದರ್ಭದಲ್ಲಿ ಜಾಗ್ರಾತೆ ಏಹಿಸಬೇಕು
    • ಲೋಹದ ಶೀಟನ್ನು ಎತ್ತರವಾದ ಸಸಿ ಮಡಿಯ ೪ ರಿಂದ ೫ ಇಂಚು ಆಳದಲ್ಲಿ ಒಳಿ ಸೇರಿಸಿ ಬೇಕು. ಸಸಿಗಳನ್ನು ಮಣ್ಣಿನೊಂದಿಗೆ ಬೇರುಗಳಿಗೆ ತೊಂದರೆಯಾಗದಂತೆ ಎತ್ತ ಬೇಕು.
    • ಒಂದೊಂದೇ ಸಸಿಯನ್ನು ಮಣ್ಣ ಮತ್ತು ಬೀಜ ಗಳೊಂದಿಗೆ ಮೇಲ್ದದರದಲ್ಲಿ ನಾಟಿ ಮಾಡಬೇಕು. ನಾಟಿ ಮಾಡುಲು ಹೆಬ್ಬೆರಳು ಮತ್ತು ತೋರು ಬೆರಳುಗಳನ್ನು ಉಪಯೋಗಿಸ ಬೇಕು
    • ಪ್ರಾರಂಭದ ಹಂತದಲ್ಲಿ ಒಂದು ಎಕರೆ ನಾಟಿ ಮಾಡುಲು ೧೦-೧೫ ಕಾರ್ಮಿಕರ ಬೇಕು

    ನೀರಿನ ನಿರ್ವಹಣೆ.

    • ನೀರನ್ನ ಕೊಡುವ ಉದ್ದೇಶ ಮಣ್ಣನ್ನು ಒದ್ದೆಯಾಗಿ ಡುವುದು.
    • ಮಣ್ಣಿನಲ್ಲಿ ಚಿಕ್ಕದಾದ ಸೀಳುಗಳು, ಕಂಡು ಬಂದಾಗ ಮತ್ತೆ ನೀರನ್ನು ಹಾಯಿಸುವುದು
    • ನಿಯಮಿತವಾಗಿ ಮಣ್ಣನ್ನು ಹಸಿ ಮಾಡುವುದು ಹಾಗು ಒಣಗಿಸಿವುದರಿಂದ ಸೂಕ್ಷ್ಮ ಜೀವಿಗಳು ಚರುವಟಿಕೆ ಹೆಚ್ವಾಗಿತ್ತದೆ ಮತ್ತು ಸಸ್ಯಕ್ಕೆ ಮಣ್ಣನ ಪೋಷಕಾಂಶಗಳ ಲಭ್ಯತೆ ಹೆಚ್ಚಾಗುತ್ತದೆ.

    ಕಳೆ ನಿರ್ವಹಣೆ.

    • ಶ್ರೀ‘ ಪಧ್ದತಿಯಲ್ಲಿ ನೀರುನ್ನು ನಿಲ್ಲಿಸದೇ ಇರುವುದರಿಂದ ಕಳೆಗಳು ಹೆಚ್ಚಾಗಿ ಬೆಳಯುತ್ತದೆ.
    • ಎರಡು ಸಾಲುಗಳ ಮಧ್ಯದಲ್ಲಿ ವೀಡರ್ ದಬ್ಬುವುದರಿಂದ ಕಳೆಗಳು ಮಣ್ನಿನಲ್ಲಿ ಬೆರೆತು ಹೋಗುತ್ತದೆ.
    • ಸಸ್ಯಕ್ಕೆ ಹತ್ತಿರುವಿರುವ ಕಳೆಗಳನ್ನು ಕ್‌ಐ ಯಿಂದ ಕೀಳ ಬೇಕು

    ಶ್ರೀ ಪಧ್ದತಿಯಿಂದಗುವ ಲಾಭಗಳು.

    • ಅಧಿಕ ಇಳುವರಿ – ಭತ್ತ ಮತ್ತು ಹುಲ್ಲು
    • ಸುಮಾರು ೧೦ ದಿನಗಳಷ್ಟು ಬೆ ಳೆಯ ಅವಧಿ ಕಡಿಮೆಯಾಗುತ್ತದೆ.
    • ಕಡಿಮೆ ರಾಸಾಯಿನಿಕ ಪರಿಕರಗಳ ಆವಶ್ಯಕತೆ.
    • ಜೊಳ್ಳು ಭತ್ತಗಳು ಕಡಿವಿ ಯಾಗುತ್ತದೆ
    • ಧಾನ್ಯದ ಆಕಾರದಲ್ಲಿ ವ್ಯತ್ಯಾಸವಾಗದೇ ತೊಕ ಹೆಚ್ಚಾಗುತ್ತದೆ.
    • ಭತ್ತದಿಂದ ಹೆಚ್ಚಿನ ಅಕ್ಕಿಯನ್ನು ಪಡೆಯಬಹುದು
    • ಬಿರಗಾಳಗೆ ತಡೆದುಕೊಳ್ಳದ ಶಕ್ತಿಯನ್ನು ಪಡೆಯಬಹುದು.
    • ಚಳಿಯನ್ನು ಸಹಿಸಿಕೊಳ್ಳವ ಶಕ್ತಿ ಇರುತ್ತದೆ.
    • ಮಣ್ಣಿನಲ್ಲಿ ಆರೋಗ್ಯದಲ್ಲಿ ಸುಧಾರಣೆ ’” ಜೈವಿಕ ಚಟುವಟಿಕೆಯು ಹೆಚ್ಚಾಗುವುರಿಂದ ಮಣ್ಣಿನ.
  13. ‘ಶ್ರೀ ಪಧ್ದತಿಯಲ್ಲಿನ ಅನಾನುಕೊಲತೆಗಳು.
  • ಪ್ರಾರಂಭದ ವರ್ಷಗಳಲ್ಲಿ ಈ ಅಧಿಕ ಕೊಲಿ ಖರ್ಚು
  • ಅವಶ್ಯಕವಿರುವ ನೈ ಪುಣ್ಯತೆ/ಕೌಶಲ್ಯಗಳನ್ನು ಕಲಿಯಲು ಕಷ್ಟ.
  • ನೀರಾವರಿ ಸೌಲ;ಭ್ಯವಿಲ್ಲದಿರುವಾಗ ‘ಶ್ರೀ ಪಧ್ದತಿಯನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ

(ಮೂಲ ವಾಸಕ್- ಸಿ ಎಸ್ ಎಪ ಡಬ್ಲೊ ಡಬ್ಲೊ ಎಫ್ ಕೃಷಿ ವಿಶ್ವ ವಿದ್ಯಾಲಯದ ವೆಬ್ ಸೈಟ್ ಚಿತ್ರಗಳು ಸಿಎಸ್‌ಎ,ಜಲ ಸ್ಪಂದನ ವೆಚ ಸೈಟಿನಿಂದ) ತಮಿಳು ನಾಡು

ಕದಿರಮಂಗಳಂ ‘ಶ್ರೀ‘ ಪದ್ದತಿ ಭತ್ತ

(ಹಳ್ಳಿಯಲ್ಲಿ ಅಭಿವ್ರಧ್ದಿ ಪಡಿಸಿ ಮತ್ತು ಪಾಲಿಸಿದವರು ಶ್ರೀ ಎಸ್. ಗೋಪಾಲ್, ಕಾವೇರಿ. ಡೆಲ್ವಾ ಜೋನ್,ತಮಿಳು ನಾಡು ರಾಜ್ಯ) ( ನದಿ ಮುಖಜ ಭೊಮಿ)

ಈ ವಿದಾನವನ್ನು ‘ಶ್ರೀ ಪಧ್ದತಿಯ ಮುಖ್ಯ ಅಂಶಗಳನ್ನು ಗಮನದಲ್ಲಿ ಟ್ಟು ಕೊಂಡು ಕಾವೇರಿ ಡೆಲ್ಚೆ ಪ್ರಾಂತಕ್ಕೆ ಅನುಗುಣವಾಗುವಂತೆ ಅಭಿವೃಧ್ದಿ ಪಡಿಸಲಾಗಿದೆ.

‘ಶ್ರೀ ಪಧ್ದತಿಯಲ್ಲಿ ನಾಟಿಯ ಬಗೆಗೆ ರೈತರಿಗೆ ಇರುವ ಸಮಸ್ಯೆ(concern!)೮ ರಿಂದ ೧೨ ದಿನಗಳ ಸಸಿಯು ‘ಶ್ರೀ ಪಧ್ದತಿಯಲ್ಲಿ ನಾಟಿ ಮಾಡಿದಾಗ ಅತಿ ಹೆಚ್ಚಿನ ಉಷ್ಣಾಂಶ ಮತ್ತು ಗಾಳಿ ಯಿದ್ದರೆ ಒಣಗಿ ಹೋಗುತ್ತದೆ.

ರೈತರ ಸಮಸ್ಯಗೆ ಸೊಕ್ತವಾದ ಪರಿಹಾರ / ಮೊದಲು ಐದು ಚಿಕ್ಕ ಸಸಿಗಳನ್ನು ಗುಂಪಾಗಿ ನಾಟಿಮಾಡಿ ಎರೆಡು ವಾರ ಬಿಡುವುದು . ಇದರಿಂದ ಸಸಿಗಳಿಗೆ ಅಧಿಕ ಉಷ್ಣಾಂಶ ಮತ್ತು ಗಾಳಿಯಿಂದ ರಕ್ಷಣೆ ಸಿಕ್ಕಂತಾಗುವುದು. ಎರಡು ವಾರಗಳ ನಂತರ ಸಸಿಗಳನ್ನು ( ಐದು ನಾಟಿರುವುಗಳನ್ನು) ಕಿತ್ತು ಪುನಃ ಒಂದೊಂದಾಗಿ ನಾಟಿ ಮಾಡುವುದು. ಇದರಿಂದ ಸಸಿಗಳು ಗಾಢವಾಗಿ (1)  ಬೆಳೆದು ಸಾಯುದಿಲ್ಲ.

ಈ ಪಧ್ದತಿಯಲ್ಲಿನ ಲೋಪ ; ಎರಡನೇ ನಾಟಿ ಮಾಡುವುದಕ್ಕೆ ಹೆಚ್ಚಿಗೆ ಕೊಲಿ ಕಾರ್ಮಿಕರ ಅವಶ್ಯಕತೆ ಒಂದು ಲೋಪವಾಗಿದೆ. ಆದರೆ, ರೈತರು ಈಪಧ್ದತಿಯಿಂದ ಬರುವ ಅಧಿಕ ಇಳುವರಿಯ ನಾಟಿ ಮಾಡಲು ಕೊಲಿ ಗೋಸ್ಕರ ಮಾಡುದ ಖರ್ಚುನ್ನು ಸಮತೋಲನ ಗೊಳಸುತ್ತದೆಂದು ಭಾವಿಸುತ್ತಿದ್ದಾರೆ.

ಫಲಿತಾಂಶ ಸರಾಸರಿ ೭ .ಸ೫ಸ ಟನ್ ಇಳುವರಿಯನ್ನು ಈ ಪಧ್ದತಿಯಲ್ಲಿ ಪಡೆಯ ಬಹುದು.

ಈ ವಿಧಾನ ದಲ್ಲಿ ಆಚರಿಸುವ ಪಧ್ದತಿಗಳು

ಸಸಿ ಮಡಿ ತಯಾರಿ

  • ೧೨ ದಿನ ಗಳೊಳಗೆ ಉತ್ತಮ ಸಸಿಯನ್ನು ಪಡೆಯಲು ಸೊಕ್ತ ನೀರಿನ ವ್ಯವಸ್ಧೆ ಮತ್ತು ಬಸಿ ಕಾಲುವೆ ಇರುವ ಸ್ಧಳ ಅವಶ್ಯಕ.
  • ಒಂದು ಹೆಕ್ಟೇರಿಗೆ ( ೨.೫ ಎಕೆರೆ) ಬೇಕಾಗುವ ಸಸಿಗಳನ್ನು ಬೆಳೆಸಲು ೧೦೦ ಚ.ಮೀ (ಕೇವಲ ೨-೫ ಸೆಂಟುಗಳು) ಜಾಗ ತಯಾರು ಮಾಡಬೇಕು.
  • ೨೦೦ ಅಡಿ ಉದ್ದ, ೧ ಮೀ ಅಗಲ ವಿರುವ ೩೦೦ ಗೇಜ್ ಪಾಲಿಧೀನ್ ಹಾಳೆಯ ಒಂದು ಹೆಕ್ಟ್ರರ್ ಗೆ ಬೇಕಾಗುವ ಸಸಿಗಳನ್ನು ಬೆಳೆಸಲು ಸಾಕಾಗುತ್ತಿದೆ.
  • ೧ ಮೀ ಉದ್ದ,೦. ೫ ಮೀ ಅಗಲ ಮತ್ತು ೪ ಸೇಂ.ಮಿ ಎತ್ತರವಿರುವ ಚೌಕಟ್ಟು ಬೀಜಗಳನ್ನು ಬಿತ್ತಲು ಅವಶ್ಯಕ.
  • ಒಂದು ಹೆಕ್ಟ್ಗರ್ ಗೆ ಬೇಕಾಗುವ ಸಸಿಯನ್ನು ಪಡೆಯಲು ೫ ಕೆ.ಜಿ ಮೊಳಕೆ ಯೊಡದ ಬೀಜ ಬೇಕಾಗುತ್ತದೆ. ಮೊಳಕೆಯೊಡದ ಬೀಜ ಗಳಿಗೆ ಅಜೋ ಸ್ವೆರಿಲ್ಲಿ ಮತ್ತು ಫಾಸ್ಪೋ ಬ್ಯಾಕ್ಟೀರಿಯ ಜೈವಿಕ ಗೊಬ್ಬರ ಗಳಿಂದ ಉಪಚರಿಸಬೇಕು .ಉಪಚರಿಸಿದ ಜರಡಿ ಹಿಡಿದ ಸಾವಯವ ಗೊಬ್ಬರ/ ಕಾಂಪೋಸ್ಟ್ ನಿಂದ ತೆಳುವಾಗಿ ಹೊದಿಕೆ ಮಾಡಿ .ರೋಸ್ ಕ್ಯಾನ್ ದಿಂದ ದಿನ ಕ್ಕೆರಡು ಸಾರಿ ಐದು ದಿನಗಳವರೆಗೆ ನೀರನ್ನು ಹಾಕಬೇಕು.
  • ೧೫೦ ಗ್ರಾಂ ಯೂರಿಯವನ್ನು ೩೦ ಲೀಟರ್ ನೀರಿನಲ್ಳಿ ಕರಗಿಸಿ ,೮ ನೇ ದಿನ ಸಸಿಗಳಿಗೆ ಹಾಕಬೇಕು.
  • ೧೨ ದಿನ ವಯಸ್ಸಿನ ಸಸೆಯನ್ನು ಬೇಜದ ಕವಚ ಮತ್ತು ಬೇರು ಗಳೇಂದಿಗೆ ಪ್ರಧಾನ ಜಮೀನಿನಲ್ಲಿ ನಾಟಿ ಮಾಡಲು ಬಳಸುತ್ತಾರೆ..

ನಾಟಿ ಮಾಡು ವುದು.F ಮೊದಲ ನಾಟಿ

  • ಜಮೀನಿನ ಒಂದು ಮೂಲೆಯಲ್ಲಿ ೮ ಸೆಂಟುಗಳಷ್ಟು ( ೮೦೦ ಚ. ಮೀ) ಕ್ಷೇತ್ರವನ್ನು ೧೨ ದಿನ ವಯಸ್ಸಿನ ಸಸ್ಸಿಗಳನ್ನು ನಾಟಿ ಮಾಡಲು ತಯಾರು ಮಾಡ ಬೇಕು. ನಂತರ ಕ್ಷೇತ್ರದಿಂದ ಸಸಿಗಳನ್ನು ೧ ಹೆಕ್ಟೆರಿನಲ್ಲಿ ನಾಟಿ ಮಾಡಲಾಗುತ್ತದೆ.
  • ೧೫ ಸೇಂ. ಮೀ.* ೧೫ ಸೇಂ.ಮೀ ಅಂತರದಲ್ಲಿ ೪ ರಿಂದ ೫ ಸಸಿಗಳನ್ನು ಒಟ್ಟೊಟ್ಟಾಗಿ ನಾಟಿ ಮಾಡಲಾಗುತ್ತದೆ.
  • ನಾಟಿ ಮಾಡಿದ ೧೫ ನೇ ದಿನ ಶೇ ೦.೫೦ ( ೫ gl ಲೀ) ಯೂರಿಯ ಪಿಚಕಾರಿ ಮಾಡಬೇಕು.
  • ೨೫ ದಿನಗಳೂ ಳಗೆ ಭತ್ತದ ಸಸಿಗಳು ೨೫ ಸೇಂ. ಮೀ ನ್ನು ಎತ್ತರ ದೂಂದಿಗೆ ಉತ್ತಮ ಬೇರುಗಳನ್ನು ಹೂಂದಿರುತ್ತವೆ

ಎರಡನೇ ನಾಟಿ. :

  • ೩೦ ನೇ ದಿನ ದಲ್ಲಿ, ಮೂದಲು ನಾಟಿ ಮಾಡಿದ ಜಾಗದಿಂದ ಸಸಿಗಳನ್ನು ಜಾಗ್ರತೆಯಿಂದ ಒಂದೊಂದಾಗಿ ಬೇರ್ಪಡಿಸಬೇಕು. ೨೦ ಸೇ. ಮೀ ಅಂತರದಲ್ಲಿ ಒಂದೊಂದೇ ಸಸಿಯನ್ನು ನಾಟಿ ಮಾಡಬೇಕು.
  • ಒಂದು ಎಕರೆ ನಾಟಿ ಮಾಡಲು ಸುಮಾರು ೧೫ ಜನ ಕಾರ್ಮಿಕರು/ ಕೆಲಸಗಾರರು ಬೇಕಾಗುತ್ತರೆ.

೭. ಎರಡು ಸಾರಿ ನಾಟಿ ಮಾಡುವುದರಿಂದಾಗುವ .ಪ್ರಯೋಜನಗಳು.

  • ಸಸಿಗಳು ಉತ್ತಮವಾಗಿ ಬೆಳೆದು ನಾಟಿ ಮಾಡಿದ ನಂತರ ಸಾಯುವುದಿಲ್ಲ
  • ಸಸಿಗಳ ಉತ್ತಮ ಬೆಳವಣಿಗೆಯಿಂದ ಪ್ರಧಾನ ಜಮೀನಿನಲ್ಲಿ ಕಳೆಗಳ ಸಮಸ್ಯೆ ಕಡಿಮೆ
  • ಸಸಿಗಳು ಎತ್ತರವಾಗಿರುವದರಿಂದ ಗದ್ದೆಯಲ್ಲಿ ನೀರು ನಿಂತಿದ್ದರು ತಡೆದುಕೊಳ್ಳುತ್ತದೆ .ಗದ್ದೆಯಲ್ಲಿ ನೀರು ನಿಲ್ಲಿಸುವುದರಿಂದ ಕಳೆಗಳ ಸಮಸ್ಯೆ ಕಡಿಮೆಯಾಗುತ್ತದೆ. ಸಸಿಗಳ ಬೇರ್ಪಡಿಸುವಕೆ ಸುಲಭ
  • ಬೆಳೆಯು ಬೇಗನೆ ಸ್ಧಿರಗೊಳ್ಳವುದರಿಂದ , ನಾಟಿ ಮಾಡಿದ ೧೦ ದಿನಗಳಲ್ಲಿ ಕೋನೋ ವೀಡರ್ ನ್ನು ಕಳೆತೆಗೆಯಲು ಬಳಸಬಹುದು.
  • ಮೇಲಿನ ಎಲ್ಲಾ ಪದ್ದತಿಹಳನ್ನು ರೈತರು ಸಾಮಾನ್ಯ ವಾಗಿ ಈಗಾಗಲೇ ಆಚರಿಸುತ್ತಿರುವುದರಿಂದ ಪ್ರತ್ಯೇಕವಾದ ತುಬೇತಿಯ ಅವಶ್ಯಕತೆ ಇಲ್ಲ.

ಕಳೆ ನಿರ್ವಹಣೆ.ನಾಟಿ ಮಾಡಿದ ೧೦ ನೇ ದಿನ ಎರಡು ದಿಕ್ಕುಗಳಲ್ಲಿ ‘ ಕೋನೋ ವೀಡರ್ ಸಹಾಯದಿಂದ ಕಳೆಯನ್ನು ನಿರ್ವಹಣೆ ಮಾಡಲಾಗುವುದು. ಪ್ರತಿ ದಿಕ್ಕಿನಲ್ಲಿ ೩ ರಿಂದ ೪ ಸಾರಿ ತಿರುಗಿಸ ಬೇಕು. ಎರಡನೇ ಬಾರಿ ಕೋನೋ ವೀಡರ್/ ಕಾರ್ಮಿಕರು ಕಳೆ ತೆಗೆಯವ ಅವಶ್ಯ ಕತೆ ಇರುವುದಿಲ್ಲ. ಉಳಿತಾಯ ಮಾಡಬಹುದು.

ನೀರಿನ ನಿರ್ವಹಣೆ.ಮಣ್ಣು ಒಣಗಿದಾಗ ಇತರೆ ಬೆಳೆಗಳಗೆ ಹಾಯಿಸುವಂತೆ ನೀರನ್ನು ಹಾಯಿಸಿ. ನೀರನ್ನು ನಿಲ್ಲಿಸುವ ಅವಶ್ಯಕತೆ ಇಲ್ಲ. ಇದು ಸುಮಾರು ೫೦೦ಮಿ.ಮೀ ನಷ್ಟು ನೀರನ್ನು ಕಡಿಮೆ ಗೊಳಿಸುತ್ತದೆ.

ರಸಾಯನಿಕ ಗೊಬ್ವರಗಳ ನಿರ್ವಹಣೆ.

  • ಮೂಲ ಗೊಬ್ಬರದಾಗಿ ನಾಟಿ ಮಾಡುವ ಸಮಯದಲ್ಲಿ ರಂಜಕ ಮತ್ತು ಪೊಟ್ಯಾಷಿ ಗೊಬ್ಬರಗಳನ್ನು ಹಾಕಬೇಕು.
  • ನಾಟಿ ಮಾಡಿದ ೧೫ ದಿನಗಳ ನಂತರ ೩೦ ಕೆ.ಜಿ. ಯೂರಿಯ ಹಾಕ ಬೇಕು.
  • ಪುನಃ ೩೦ ನೇ ದಿನದಂದು ೩೦ ಕೆ. ಜಿ. ಯರಿಯವನ್ನು ಪ್ರತಿ ಹೆಕ್ಟೇರಿಗೆ ಹಾಕಬೇಕು.

Note: ೪೫ ನೇದಿನಂದು ೩೦ ಕೆ.ಜಿ. ಯೂರುಯ ಮತ್ತು ೩೦ ಕೆ. ಜಿ. ಪೋಟ್ಯಾಷಿನ್ನು ಪ್ರತಿ ಹೆ ಕ್ಟೇರಿಗೆ ಹಾಕಬೇಕು ಟಿಪ್ಪಣೆ.ಈ ಮಾಹಿತಿಯನ್ನು ಕದಿರ ಮಂಗಳಂ ಗ್ರಾಮದ ಶ್ರೀ .ರಾಜೇಶ್ ಕುಮಾರ್ ಮತ್ತು ಸೌರವ್ ನಾಯಕ್ ರವರು ಒದಗಿಸಿರುತ್ತಾರೆ. ಇವರು ನೇಮಿಸಿದ ಕೃಷಿ ವಿಸ್ತರಾಣ ಕಾರ್ಯಕರ್ತರು ಬಿಡಿಸಿ ಆ ಗ್ರಾಮದಲ್ಲಿರುವ ಬಿ. ಎಸ್ಸಿ. ಪಧವಿದರಾಗಿರುವ ಶ್ರೀ ಎಸ್. ಗೋಪಾಲ್ ಅವರು ಅಭಿ ವೃದ್ದಿ ಪಡಿಸಿ. ಆಚರಿಸುತ್ತಿದ್ದಾರೆ. ಈ ಪಧ್ದತಿಯು ತಮಿಳು ನಾಡಿನ ಕಾವೇರಿ ನದೀ ಮುಖಜ ಭೂಮಿಯಲ್ಲಿ ಅಳವಡಿಸಿ ಕೊಳ್ಳಲು ಸೂಕ್ತವಾಗಿದೆ.

SRI

ಕೊನೆಯ ಮಾರ್ಪಾಟು : 10/16/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate