অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರಂಗಿಲ್ಲದ ರೇಷಿಮೆ

ಆರ್ಥಿಕ ಬಿಕ್ಕ­ಟ್ಟಿನ ಪರಿ­ಣಾಮ ರೇಷ್ಮೆ ಕೃಷಿ-ಕೈಗಾ­ರಿ­ಕೆ­ಗಳ ಮೇಲೆ ಪರಿ­ಣಾಮ ಬೀರಿದ್ದು, ರೇಷ್ಮೆ ಉದ್ಯಮ ತತ್ತ­ರಿ­ಸು­ತ್ತಿದೆ.
ಆಹಾರ ಪದಾ­ರ್ಥ­ವ­ಲ್ಲ­ದಿ­ದ್ದರೂ ಕೃಷಿ­ಕ­ರಿಗೆ ಸಾಕಷ್ಟು ಆದಾಯ ತಂದು ಕೊಡುವ ಕ್ಷೇತ್ರ ರೇಷ್ಮೆ. ಉಳಿ­ದೆಲ್ಲಾ ವಸ್ತು­ಗಳ ಬೆಲೆ ಕುಸಿ­ದರೂ ಆಲಂ­ಕಾ­ರಿಕ ಉತ್ಪ­ನ್ನ­ಗಳ ತಯಾ­ರಿ­ಕೆಯ ಕಚ್ಚಾ­ವ­ಸ್ತು­ವಾದ ರೇಷ್ಮೆ ಬೆಲೆ ಅಷ್ಟಾಗಿ ಇಳಿ­ಕೆ­ಯಾ­ಗು­ತ್ತಿ­ರ­ಲಿಲ್ಲ. ಅಗ­ತ್ಯ­ದಷ್ಟು ರೇಷ್ಮೆ ಉತ್ಪಾ­ದ­ನೆ­ಯಾ­ಗದೇ ಇರು­ವುದು ಇದಕ್ಕೆ ಕಾರ­ಣ­ವಾದ ಪ್ರಮುಖ ಅಂಶ­ವಾ­ಗಿತ್ತು. ದೇಶೀಯ ಬಳಕೆ ಜತೆ­ಯ­ಲ್ಲಿಯೇ ಭಾರ­ತೀಯ ಮೂಲದ ಅಪ್ಪಟ ರೇಷ್ಮೆಗೆ ವಿದೇಶಿ ನೆಲೆ­ಯಲ್ಲಿ ಬೇಡಿಕೆ ಸಾಕ­ಷ್ಟಿತ್ತು. ಭಾರ­ತದ ರೇಷ್ಮೆಗೆ ಚೈನಾ ಪ್ರಬಲ ಪೈಪೋಟಿ ನೀಡು­ತ್ತಿ­ದ್ದರೂ ಶುದ್ಧ­ತೆ­ಯಲ್ಲಿ ಸ್ಪರ್ಧಿ­ಸ­ಲಾ­ಗದೇ ವಿದೇಶಿ ರಾಷ್ಟ್ರ­ಗ­ಳಲ್ಲಿ ಭಾರ­ತದ ರೇಷ್ಮೆ ತನ್ನ ಅಸ್ತಿತ್ವ ಉಳಿ­ಸಿ­ಕೊಂ­ಡಿತ್ತು.


ಸ್ಥಳೀಯ ಬೇಡಿಕೆ ಪೂರೈ­ಸ­ಲಾ­ಗದೇ ಇದ್ದರೂ, ವಿದೇ­ಶಕ್ಕೆ ರಫ್ತು ಮಾಡುವ ಕಾರ­ಣ­ದಿಂ­ದಲೇ ರೇಷ್ಮೆ ಉದ್ಯಮ ಈ ಪರಿ ಬೆಳೆ­ದಿತ್ತು. ಭಾರ­ತದ ಉತ್ಪ­ನ್ನ­ಗಳ ಪ್ರಮುಖ ಮಾರು­ಕ­ಟ್ಟೆ­ಯಾ­ಗಿದ್ದ ಅಮೆ­ರಿಕ, ಬ್ರಿಟನ್‌, ಅರಬ್‌ ರಾಷ್ಟ್ರ­ಗಳು, ಇಟಲಿ ಹಾಗೂ ಜರ್ಮ­ನಿ­ಯಿಂದ ರೇಷ್ಮೆ ಬೇಡಿ­ಕೆಗೆ ಕಡಿ­ವಾಣ ಬಿದ್ದಿದೆ. ವಿಶ್ವ ಆರ್ಥಿಕ ಹಿಂಜ­ರಿ­ತದ ಪರಿ­ಣಾಮ ದುಭಾರಿ ವಸ್ತು­ಗಳ ಮಾರು­ಕಟ್ಟೆ ಮೇಲೆ ಅಡ್ಡ ಪರಿ­ಣಾಮ ಬೀರಿದ್ದೇ ಈ ಯಡ­ವ­ಟ್ಟಿಗೆ ಕಾರಣ. ಈ ಆರ್ಥಿಕ ವರ್ಷಾಂ­ತ್ಯ­ದೊ­ಳಗೆ ಶೇ.50 ರಷ್ಟು ಬೇಡಿಕೆ ಕಡಿ­ಮೆ­ಯಾ­ಗ­ಬ­ಹು­ದೆಂದು ಕೇಂದ್ರೀಯ ರೇಷ್ಮೆ ಮಂಡಳಿ ಅಂದಾ­ಜಿ­ಸಿದೆ. ಇದು ಇಡೀ ಭಾರ­ತದ ರೇಷ್ಮೆ ಬೆಳೆ, ಉತ್ಪಾ­ದನೆ ಹಾಗೂ ಉದ್ಯ­ಮದ ಮೇಲೆ ತೀಕ್ಷ್ಣ ಪರಿ­ಣಾಮ ಬೀರ­ಲಿದೆ.

ಗರಿ ಗರಿ ರೇಷ್ಮೆ

ಇಡೀ ವಿಶ್ವ­ದಲ್ಲಿ ರೇಷ್ಮೆ ಉತ್ಪಾ­ದಿ­ಸುವ ಪ್ರಮುಖ ರಾಷ್ಟ್ರ­ಗ­ಳೆಂ­ದರೆ ಚೀನಾ ಮತ್ತು ಭಾರತ. ವಿಶ್ವ­ದಲ್ಲಿ ವಾರ್ಷಿಕ 1,53,000 ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾ­ದ­ನೆ­ಯಾ­ಗು­ತ್ತದೆ. ಇದ­ರಲ್ಲಿ ಪ್ರಮುಖ ಪಾಲು ಚೀನಾ­ದ್ದಾ­ಗಿದ್ದು, 1,30,000 ಟನ್‌­ಗ­ಳ­ಷ್ಟಿದೆ. ಭಾರ­ತವು 18,320 ಟನ್‌­ಗ­ಳಷ್ಟು ಮಾತ್ರ ಕಚ್ಚಾ ತಯಾ­ರಿ­ಸು­ತ್ತದೆ.
ರೇಷ್ಮೆ ಕೃಷಿ, ರೀಲಿಂಗ್‌, ವೀಲಿಂಗ್‌, ಗ್ರೇಡಿಂಗ್‌ ಹೀಗೆ ಒಟ್ಟು 61 ಲಕ್ಷ ಮಂದಿಗೆ ರೇಷ್ಮೆ ಉದ್ಯೋಗ ಒದ­ಗಿ­ಸಿದೆ. ಈ ಪೈಕಿ ಶೇ.60 ರಷ್ಟು ಮಂದಿ ಮಹಿ­ಳೆ­ಯ­ರಿ­ದ್ದಾರೆ.
ವಿಶ್ವ­ದಲ್ಲಿ ಎರ­ಡನೇ ರಾಷ್ಟ್ರ ಭಾರ­ತ­ವಾ­ಗಿ­ದ್ದರೆ, ಭಾರ­ತ­ದಲ್ಲಿ ಕರ್ನಾ­ಟಕ ಮೊದಲ ಸ್ಥಾನ­ದ­ಲ್ಲಿದೆ. ದೇಶ­ದಲ್ಲಿ ಒಟ್ಟು 18 ಸಾವಿರ ಟನ್‌­ಗ­ಳಷ್ಟು ರೇಷ್ಮೆ ಬೆಳೆ­ಯು­ತ್ತಿ­ದ್ದರೆ ಇದ­ರಲ್ಲಿ ಕರ್ನಾ­ಟ­ಕದ ಪಾಲು 14 ಸಾವಿರ ಟನ್‌. ಅಂದರೆ ಶೇ.70 ರಷ್ಟು ಕಚ್ಚಾ ರೇಷ್ಮೆ ಕರ್ನಾ­ಟ­ಕದ್ದೇ ಆಗಿದೆ. ಇದನ್ನು ಲೆಕ್ಕ ಹಾಕಿ­ದರೆ ರೇಷ್ಮೆ ರಫ್ತಿನ ಪ್ರಮುಖ ಪಾಲು ಕರ್ನಾ­ಟ­ಕ­ದಿಂ­ದಲೇ ಆಗು­ತ್ತದೆ.


ಕರ್ನಾ­ಟ­ಕದ ಕೋಲಾರ, ರಾಮ­ನ­ಗರ, ಚಿತ್ರ­ದುರ್ಗ, ಚಿಕ್ಕ­ಬ­ಳ್ಳಾ­ಪುರ, ಹಾಸನ, ಶಿವ­ಮೊಗ್ಗ, ದಾವ­ಣ­ಗೆರೆ, ಮೈಸೂರು ಮತ್ತಿ­ತರ ಜಿಲ್ಲೆ­ಗ­ಳಲ್ಲಿ ರೇಷ್ಮೆ ಕೃಷಿ­ಯಲ್ಲಿ ತೊಡ­ಗಿ­ಕೊಂಡ ಸಾಕಷ್ಟು ಮಂದಿ­ಯಿ­ದ್ದಾರೆ. ಉತ್ತ­ರದ ಜಿಲ್ಲೆ­ಗಳೂ ಇದ­ರಿಂದ ಹೊರ­ತಲ್ಲ.
ಕೆಲವು ರೈತ­ರಿಗೆ ರೇಷ್ಮೆ ಕೃಷಿ ಉಪ ಕಸುಬು ಆಗಿ­ದ್ದರೆ ಇನ್ನು ಕೆಲ­ವರು ಪ್ರಮು­ಖ­ವಾಗಿ ಇದನ್ನು ಅವ­ಲಂ­ಬಿ­ಸಿ­ದ್ದಾರೆ. ಮಾರು­ಕಟ್ಟೆ ಕೊರತೆ ಮಧ್ಯೆಯೂ ರೇಷ್ಮೆ ಕೃಷಿ­ಯನ್ನು ಜೀವಂ­ತ­ವಾಗಿ ಇಟ್ಟಿ­ರು­ವುದು ರೈತರ ಸಾಧ­ನೆಯೇ ಸರಿ. ಏಕೆಂ­ದರೆ ರೇಷ್ಮೆಯ ಪ್ರಮುಖ ಮಾರು­ಕಟ್ಟೆ ರಾಮ­ನ­ಗರ(ಈಗ ಜಿಲ್ಲಾ ಕೇಂದ್ರ­ವಾ­ಗಿ­ರುವ)ದಲ್ಲಿ ಮಾತ್ರ­ವಿದ್ದು, ರಾಜ್ಯದ ಯಾವುದೇ ಭಾಗದ ರೈತ ಇಲ್ಲಿಗೆ ತಂದು ಮಾರ­ಬೇಕು. ಇಲ್ಲಾ ಆಯಾ ಜಿಲ್ಲೆ­ಗಳ ದಲ್ಲಾ­ಳಿ­ಗ­ಳಿಗೆ ಮಾರ­ಬೇ­ಕಾದ ಅನಿ­ವಾ­ರ್ಯ­ತೆ­ಯಿದೆ.


ರೇಷ್ಮೆ ಕೃಷಿ ಉಳಿದ ಕೃಷಿ­ಗ­ಳಂ­ತಲ್ಲ. ಅದಕ್ಕೆ ತನ್ನದೇ ಆದ ನಾಜೂಕು ಬೇಕು. ರೇಷ್ಮೆ ಹುಳು­ಗ­ಳಿಗೆ ಬೇಕಾದ ಆಹಾರ( ಹಿಪ್ಪು ನೇರಳೆ ಸೊಪ್ಪು) ಬೆಳೆ­ಯ­ಬೇಕು, ಅದನ್ನು ತಂದು ಓರಣ ಮಾಡ­ಬೇಕು. ರೇಷ್ಮೆ ತಟ್ಟಿ­ಗ­ಳಲ್ಲಿ ಆ ಸೊಪ್ಪು­ಗ­ಳನ್ನು ನೀಟಾಗಿ ಕತ್ತ­ರಿಸಿ ಹಾಕಿ, ಹುಳು­ಗ­ಳನ್ನು ಅದಕ್ಕೆ ಬಿಡ­ಬೇಕು. ಸೊಪ್ಪಿ­ನಲ್ಲಿ ರೋಗಾ­ಣು­ಗ­ಳಿ­ದ್ದರೆ ಅಥವಾ ರೇಷ್ಮೆ ತಟ್ಟಿ­ಗ­ಳಲ್ಲಿ ಸೋಂಕಿ­ದ್ದರೆ ಅಷ್ಟೂ ಹುಳು­ಗಳು ಪ್ರಾಣ ಬಿಡು­ತ್ತವೆ. ಹುಳು­ಗ­ಳಿಗೆ ಕೊಟ್ಟ ದುಡ್ಡು ಕೂಡ ವಾಪಸ್ಸು ಬರದು. ಹಾಗೆಯೇ ಹುಳು ಬಲಿತು, ಗೂಡು ಕಟ್ಟಿ ರೇಷ್ಮೆ ನೂಲನ್ನು ತಯಾ­ರಿ­ಸು­ವ­ವ­ರೆಗೂ ಅದನ್ನು ಮಗು­ವಿ­ನಂತೆ ಆರೈಕೆ ಮಾಡ­ಬೇಕು. ನಿಜ­ವಾಗಿ ಹೇಳ­ಬೇ­ಕೆಂ­ದರೆ ಬಾಣಂ­ತಿ­ಯನ್ನು ಸಲ­ಹಿದ ರೀತಿಯ ಸೂಕ್ಷ್ಮತೆ ರೇಷ್ಮೆ ಕೃಷಿಗೆ ಅಗತ್ಯ.


ಇತ್ತೀ­ಚಿನ ವರ್ಷ­ಗ­ಳಲ್ಲಿ ಬೆಲೆ ಉತ್ತ­ಮ­ವಾ­ಗಿ­ದೆ­ಯಾ­ದರೂ ಕೂಲಿ­ಗಳ ಸಮ­ಸ್ಯೆ­ಯಿಂದ ರೈತರು ಬಸ­ವ­ಳಿ­ದಿ­ದ್ದಾರೆ. ಮೇಲೆ ಉಲ್ಲೇ­ಖಿ­ಸಿ­ದಂ­ತಹ ಅಷ್ಟೂ ಕೆಲ­ಸ­ವನ್ನು ಕೇವಲ ಮನೆ­ಯಂದಿ ಮಾಡ­ಲಾ­ಗು­ವು­ದಿಲ್ಲ. ಅದಕ್ಕೆ ಸೂಕ್ಷ್ಮ­ತೆ­ಯುಳ್ಳ ಕೃಷಿ ಕೆಲ­ಸ­ಗಾ­ರರೇ ಬೇಕು. ನಗ­ರೀ­ಕ­ರ­ಣ­ದಿಂ­ದಾಗಿ ರೇಷ್ಮೆ ಕೃಷಿ­ಕರು ಕೂಲಿ­ಕಾ­ರ್ಮಿ­ಕರ ಸಮ­ಸ್ಯೆ­ಯನ್ನು ಎದು­ರಿ­ಸು­ತ್ತಿ­ದ್ದಾರೆ.


ಇದರ ಜತೆಗೆ ಮಲ­ಬಾರಿ ತಳಿಗೆ ತಗು­ಲಿ­ರುವ ರೋಗ­ದಿಂ­ದಾಗಿ ಸುಮಾರು 47 ಸಾವಿರ ಹೆಕ್ಟೇ­ರ್‌­ನ­ಲ್ಲಿದ್ದ ಮಲ­ಬಾರಿ ತಳಿ­ಯನ್ನು ರೈತರು ಕಿತ್ತು­ಹಾ­ಕಿ­ದ್ದಾರೆ. ಇದು ಕೂಡ ರೈತ­ರನ್ನು ಕಾಡು­ತ್ತಿ­ರುವ ಸಮ­ಸ್ಯೆ­ಯಾ­ಗಿದೆ.


ಇದರ ಜತೆಗೆ ರೇಷ್ಮೆ ನೂಲು ತೆಗೆ­ಯು­ವ­ವರು, ರೇಷ್ಮೆ ಮಗ್ಗ­ಗ­ಳಲ್ಲಿ ರೈತ­ರಷ್ಟೇ ಪ್ರಮಾ­ಣ­ದಲ್ಲಿ ಕೆಲಸ ಮಾಡು­ವ­ವ­ರಿ­ದ್ದಾರೆ. ಗ್ರೇಡಿಂಗ್‌, ಬಣ್ಣ ಹಾಕು­ವ­ವರು ಕೂಡ ಸಮ­ಪ್ರ­ಮಾ­ಣ­ದ­ಲ್ಲಿ­ದ್ದಾರೆ. ಮಾರು­ಕಟ್ಟೆ ಮಾಡು­ವ­ವ­ರನ್ನು ಹೊರತು ಪಡಿ­ಸಿಯೂ ನೇರ­ವಾಗಿ ರೇಷ್ಮೆ ಕೃಷಿ-ಉದ್ಯ­ಮ­ದಲ್ಲಿ ಸಾಕಷ್ಟು ಮಂದಿ ತೊಡ­ಗಿ­ದ್ದಾರೆ. ವಿದೇ­ಶದ ರಫ್ತು ಶೇ.50 ರಷ್ಟು ಕುಸಿತ ಕಂಡ ಪರಿ­ಣಾಮ ಇವ­ರೆಲ್ಲಾ ತತ್ತ­ರಿ­ಸ­ಲಿ­ದ್ದಾರೆ. ದೇಶ­ದಲ್ಲಿ ಒಟ್ಟು 61 ಲಕ್ಷ ಮಂದಿ ರೇಷ್ಮೆ­ಯನ್ನು ನೆಚ್ಚಿ­ಕೊಂ­ಡಿದ್ದು, ಮಾರ್ಚ್‌ ಅಂತ್ಯ­ದೊ­ಳಗೆ 6 ಲಕ್ಷ ಮಂದಿ ಕೆಲಸ ಕಳೆ­ದು­ಕೊ­ಳ್ಳ­ಲಿ­ದ್ದಾ­ರೆಂದು ಅಂದಾ­ಜಿ­ಸ­ಲಾ­ಗಿದೆ.


ಚೀನಾ ರೇಷ್ಮೆ:

ಭಾರ­ತ­ದಲ್ಲಿ ಕಚ್ಚಾ ರೇಷ್ಮೆ, ರೇಷ್ಮೆ ಉತ್ಪನ್ನ ಸ್ಥಳೀಯ ಬೇಡಿ­ಕೆ­ಯನ್ನು ಪೂರೈ­ಸುವ ಮಟ್ಟ­ದ­ಲ್ಲಿಲ್ಲ. ಈ ಮಾರು­ಕಟ್ಟೆ ಕೊರತೆ ಹಾಗೂ ಭಾರ­ತದ ರೇಷ್ಮೆಗೆ ವಿದೇಶಿ ಮಾರು­ಕ­ಟ್ಟೆ­ಯಲ್ಲಿ ಬೇಡಿಕೆ ಇರು­ವು­ದನ್ನು ಗಮ­ನಿ­ಸಿದ ಮಾರಾ­ಟ­ಗಾ­ರರು ಕಡಿಮೆ ದರ­ದಲ್ಲಿ ಸಿಗುವ ಚೀನಾ ರೇಷ್ಮೆಯ ಮೊರೆ ಹೋಗಿ­ದ್ದಾರೆ.
ಕಳ್ಳ ಮಾರ್ಗ­ದಿಂದ ಭಾರ­ತದ ಮಾರು­ಕ­ಟ್ಟೆಗೆ ಸಾಕಷ್ಟು ಚೀನಾ ರೇಷ್ಮೆ ಹರಿದು ಬರು­ತ್ತಿದ್ದು ಮಾರು­ಕಟ್ಟೆ ಹಾಗೂ ರೇಷ್ಮೆ ಕೃಷಿಯ ಮೇಲೆ ಹೊಡೆತ ನೀಡಿದೆ.
ರೇಷ್ಮೆ ಕೃಷಿ­ಕರ ಒತ್ತ­ಡ­ದಿಂ­ದಾಗಿ ವಿದೇ­ಶ­ದಿಂದ ಆಮ­ದಾ­ಗುವ ರೇಷ್ಮೆ ಮೇಲೆ ಆಮದು ನಿರ್ಬಂಧ ಶುಲ್ಕ­ವನ್ನು ಕೇಂದ್ರ ಸರ್ಕಾರ ವಿಧಿ­ಸಿದೆ. ಇದು 2009 ಮಾರ್ಚ್‌ಗೆ ಅಂತ್ಯ­ಗೊ­ಳ್ಳ­ಲಿದೆ. ಆರ್ಥಿಕ ಹಿಂಜ­ರಿ­ತದ ಕಾರ­ಣ­ದಿಂದ ದೇಶೀಯ ರೇಷ್ಮೆ ಕಾಪಾ­ಡಲು ಕೇಂದ್ರ ಸರ್ಕಾರ 2013 ರವ­ರೆಗೆ ಆ್ಯಂಟಿ ಡಂಪಿಂಗ್‌ ಶುಲ್ಕ­ವನ್ನು ವಿಸ್ತ­ರಿ­ಸಿದೆ.
ಹಾಗಿದ್ದೂ ರೇಷ್ಮೆ ಪರಿ­ಸ್ಥಿತಿ ಸುಧಾ­ರಿ­ಸಿಲ್ಲ. ವಿದೇ­ಶ­ದಿಂದ ಬೇಡಿಕೆ ಕಡಿ­ಮೆ­ಯಾ­ಗಿ­ರುವ ಹಿನ್ನೆ­ಲೆ­ಯಲ್ಲಿ ರೇಷ್ಮೆ ರಫ್ತು ಮೇಲೆ ಹೊಡೆತ ಬಿದ್ದಿದೆ. ಈ ಹಿನ್ನೆ­ಲೆ­ಯಲ್ಲಿ ಭತ್ತ, ರಾಗಿ, ಸೆಣಬು ಮತ್ತಿ­ತರ ಬೆಳೆ­ಗ­ಳಿಗೆ ನೀಡು­ವಂತೆ ಬೆಂಬಲ ಬೆಲೆ ನೀಡು­ವಂತೆ ಆಗ್ರಹ ಕೇಳಿ­ಬಂ­ದಿದೆ. ಇದಕ್ಕೆ ಕೇಂದ್ರ ಸರ್ಕಾರ ಮನಸ್ಸು ಮಾಡ­ಬೇ­ಕಷ್ಟೆ. ಮೈಸೂರು ಸಿಲ್ಕ್‌ ಎಂದು ಹೆಸ­ರು­ವಾ­ಸಿ­ಯಾ­ಗಿ­ರುವ ಕರ್ನಾ­ಟ­ಕದ ರೇಷ್ಮೆ­ಯನ್ನು ಉಳಿ­ಸಲು, ರೇಷ್ಮೆ ಕೃಷಿ­ಕ­ರಲ್ಲಿ ಧೈರ್ಯ ತುಂಬಲು ರಾಜ್ಯ­ಸ­ರ್ಕಾರ ಕೂಡ ಮುಂದಾ­ಗ­ಬೇ­ಕಾದ ಅಗ­ತ್ಯ­ವಿದೆ.

ಮೂಲ : ರೈತಾಪಿ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate